ಯುವ ಪೀಳಿಗೆಗೆ ವಿವೇಕಾನಂದರ ಸಂದೇಶ ಸ್ಪೂರ್ತಿ
ಕೃಷ್ಣಾ ಶಾಲೆಯಲ್ಲಿ ವಿವೇಕರ ದಿನಾಚರಣೆ
ಯಾದಗಿರಿ, ಶಹಾಪುರಃ ಹಿಂದೂ ಧರ್ಮದ ನವೋನ್ಯತೆಯನ್ನು ಜಗದುದ್ದಗಲಕ್ಕೂ ಪಸರಿಸಿದ ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಯುವ ಮುಖಂಡ ಹಯ್ಯಾಳಪ್ಪ ಯಾದವ್ ಹೇಳಿದರು.
ತಾಲೂಕಿನ ಕಾಡಂಗೇರಾ ಗ್ರಾಮದ ಕೃಷ್ಣಾ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಬಾಲ್ಯದಿಂದಲೆ ಭಾರತದ ಮಹಾನ್ ಸಂತ ವಿವೇಕರ ಚರಿತ್ರೆ ತಿಳಿದುಕೊಳ್ಳಬೇಕು, ಅವರೊಬ್ಬರು ಮಹಾನ್ ಸಂತ, ಆಧ್ಯಾತ್ಮೀಕ ಶಕ್ತಿ ಮೂಲಕ ಇಡಿ ಪ್ರಪಂಚ ಆತನಡೆಗೆ ನೋಡುವಂತೆ ಮಾಡಿತು.
ಆತನ ಮಹಾ ಜ್ಞಾನ, ದೇಶದ ಅಭಿಮಾನ, ಆತನಲ್ಲಿರುವ ನವಚೈತನ್ಯ ಅಗಾಧ ಆತ್ಮವಿಶ್ವಾಸ ಕಂಡು ಜನ ಬೆರಗಾಗಿದ್ದರು. ಅವರು ಮಾತನಾಡಲು ಶುರುವಾದರೆ ಎದುರಿನವರು ಮಖ ವಿಸ್ಮಿತರಾಗಿ ಕೇಳುತಿದ್ದರು. ಅವರು ಹೇಳತ್ತಿದ್ದ ಪರತಿ ನುಡಿಯಲ್ಲಿ ಸತ್ಯಾಂಶ ಉತ್ತಮ ಸಂದೇಶವಿತ್ತು. ಅವರ ಜೀವನೇ ಆದರ್ಶಮಯವಾಗಿದ್ದು, ಪ್ರಿ ಯುವಕರಿಗೆ ವಿವೇಕರು ರೋಡ ಮಾಡಲ್ ಆಗಿದ್ದಾರೆ.
ವಿವೇಕರ ಜೀವನ ಚಿರಿತ್ರೆ ಪ್ರಿಯೊಬ್ಬರಿಗೆ ಬದುಕಿನ ಪಾಠ ಕಲಿಸಲಿದೆ. ಅವರ ಚರಿತ್ರೆ ಮಕ್ಕಳು ಓದಬೇಕು. ಅದರಿಂದ ಸಾಕಷ್ಟು ವಿಷಯಗಳನ್ನು ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾಳಪ್ಪ ಯಾದವ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿಂಧೂ ಕ್ಯಾತನಾಳ, ಸೋಪಣ್ಣ ಶಹಾಪೂರ, ಭೀಮಣ್ಣ ಆಡಿನೋರ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಭಾಗವಹಿಸಿದ್ದರು.