ಜನಮನಪ್ರಮುಖ ಸುದ್ದಿ
ದೋಸ್ತಿ ಸರ್ಕಾರ ಖತಂ : ಹೆಚ್.ಡಿ.ಕುಮಾರಸ್ವಾಮಿ ಆಡಳಿತ ಅಂತ್ಯ!
ಬೆಂಗಳೂರು: ಕೊನೆಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸಂಜೆ 7:22ರ ಸುಮಾರಿಗೆ ವಿಶ್ವಾಸ ಮತ ಮಂಡಿಸಿದರು. ಮೊದಲಿಗೆ ಸಿಎಂ ಕುಳಿತ ಸಾಲಿನಿಂದ ವಿಶ್ವಾಸ ಮತದ ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು. ವಿಧಾನಸಭೆ ಸದಸ್ಯರು ಎದ್ದುನಿಂತು ತಮ್ಮ ಮತ ಸೂಚಿಸಿದರು. ತಲೆ ಎಣಿಕೆ ಮೂಲಕ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೆ ನಿರ್ಣಯದ ಪರ ಇರುವವರ ಮತ ಎಣಿಕೆ ಆರಂಭ ಮಾಡಲಾಯಿತು. ಬಳಿಕ ಡೆಪ್ಯೂಟಿ ಸ್ಪೀಕರ್ ಅವರ ಅಭಿಪ್ರಾಯ ಸಂಗ್ರಹಿಸಲಾಯಿತು.
ಪರ ಇರುವವರ ಮತ ಎಣಿಕೆ ಬಳಿಕ ವಿಶ್ವಾಸ ಮತದ ವಿರುದ್ಧ ಇರುವವರ ಮತ ಎಣಿಕೆ ನಡೆಯಿತು. ವಿಶ್ವಾಸ ಮತ ನಿರ್ಣಯದ ಪರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಒಟ್ಟು 99 ಮತಗಳು ಬಂದರೆ, ವಿರೋಧಿಸಿ ಬಿಜೆಪಿಯಿಂದ 105 ಮತಗಳು ದಾಖಲಾದವು. ಹೀಗಾಗಿ, ಸಿಎಂ ಮಂಡಿಸಿದ ವಿಶ್ವಾಸ ಮತಕ್ಕೆ ಸೋಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದರು.