ವಿನಯ ವಿಶೇಷ

ಹೊನ್ಕಲ್ ಹೈಕ ಭಾಗದ ಸಾಹಿತ್ಯ ಚೇತನ-ಹಾರಣಗೇರಾ

ಇಂದು ಯಾದಗಿರಿಯಲ್ಲಿ ಸಾಹಿತ್ಯ ಸಮ್ಮೇಳನ

-ರಾಘವೇಂದ್ರ ಹಾರಣಗೇರಾ
ಒಬ್ಬ ವ್ಯಕ್ತಿ ಸಾರ್ವಜನಿಕ ವ್ಯಕ್ತಿಯಾಗಿ, ಎಲ್ಲರಿಗೂ ಬೇಕಾಗುವ ಸಂಪನ್ಮೂಲರಾಗಿ ಗುರುತಿಸಲು ಜ್ಞಾನ, ಪ್ರತಿಭೆ, ಕೌಶಲ್ಯ, ಕಲೆ, ಸಾಮಥ್ರ್ಯ ಮುಂತಾದ ವಿಶಿಷ್ಟತೆಗಳು ಬೇಕಾಗುತ್ತದೆ. ಸಮಾಜ. ಸಂಸ್ಕೃತಿ, ಸಾಹಿತ್ಯ ಪರಂಪರೆ ಮತ್ತು ಭಾಷೆ ಅವುಗಳನ್ಗನು ಗುರುತಿಸಿ ಬೆಳಸುತ್ತದೆ. ಅದಕ್ಕೆ ಪ್ರತಿಯಾಗಿ ಆ ವ್ಯಕ್ತಿ ತನ್ನ ಕ್ಷೇತ್ರದ ದುಡಿಮೆಯ, ಕೃಷಿಯ, ಪ್ರಯತ್ನಗಳ ಮೂಲಕ ವಿಶಿಷ್ಟ ಕೊಡುಗೆ ನೀಡಲು ಶ್ರಮಿಸುತ್ತಾನೆ.

ಅದನ್ನು ಸಮಾಜಕ್ಕೆ ಅರ್ಪಿಸುತ್ತಾನೆ. ಇದರಿಂದ ಸಮಾಜದ ವಿವಿಧ ಕ್ಷೇತ್ರಗಳು ಆ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಯನ್ನು ಪುರಸ್ಕರಿಸಿ ಗೌರವಿಸುತ್ತದೆ. ಈ ಹಿನ್ನಲೆಯಲ್ಲಿ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಸಾಹಿತ್ಯ ಕೃಷಿಯಿಂದ ಮೌಲಿಕ ಕೃತಿಗಳನ್ನು ಅರ್ಪಿಸಿ ವಿವಿಧ ಪುರಸ್ಕಾರಗಳಿಗೆ ಬಾಜನರಾದ ಹೈದ್ರಾಬಾದ ಕರ್ನಾಟಕದ ಪ್ರಮುಖ ಲೇಖಕ, ಕವಿ, ಕಥೆಗಾರ ಸಿದ್ದರಾಮ ಹೊನ್ಕಲ್ ಅವರಿಗೆ ಯಾದಗಿರಿ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧಿಕ್ಷತೆಯ ಗೌರವಕ್ಕೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ.

ಕನ್ನಡದ ಗಣ್ಯ ಲೇಖಕ, ಕವಿಗಳಲ್ಲಿ ಒಬ್ಬರಾಗಿರುವ ಸಿದ್ದರಾಮ ಹೊನ್ಕಲ್ ಅವರು ಸಗರನಾಡಿನ ಮಡಿಲಲ್ಲಿರುವ ಶಹಾಪುರ ತಾಲೂಕಿನ ಐತಿಹಾಸಿಕ ಸಾಂಸ್ಕøತಿಕ ಪರಂಪರೆಯ ತಾಣ ಸಗರ ಗ್ರಾಮದ ಶರಣಬಸಪ್ಪ ಹೊನ್ಕಲ ಮತ್ತು ಶ್ರೀಮತಿ ಕಾಂತಮ್ಮ ಹೊನ್ಕಲ್ ದಂಪತಿಗಳ ಚೊಚ್ಚಲ ಮಗನಾಗಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಗರ ಗ್ರಾಮದಲ್ಲಿ. ನಂತರ ಸುರಪುರದ ಶ್ರೀಪ್ರಭು ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತರ ಪದವಿಯನ್ನು ಪಡೆದರು.

ಪ್ರಸ್ತತವಾಗಿ ಕಲಬುರ್ಗಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಮಾಜಶಾಸ್ತ್ರ ಭೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿಭಾವಂತ ಸಾಹಿತಿ, ಸೃಜನಶೀಲ ಬರಹಗಾರರಾದ ಸಿದ್ದರಾಮ ಹೊನ್ಕಲ್ ಅವರು ಕವನ, ಕಥೆ, ಚುಟುಕು, ಹನಿಗಾವನ, ಲಲಿತ ಪ್ರಬಂಧ, ಪ್ರವಾಸ ಕಥನ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಅಂತರಂಗದ ಹನಿಗಳು, ಅಕ್ಕನಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು, ಹೊಸಹಾಡು, ನೂರಾರು ಹನಿಗಳು, ಪಂಚನದಿಗಳ ನಾಡಿನಲ್ಲಿ, ನುಗ್ಗಿ ಬರುವ ನೆನಪುಗಳು, ಹೃದಯಗೀತೆ, ಸೃಜನ, ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಕಲಬುರ್ಗಿಯಿಂದ ಕಠ್ಮಂಡುರಿಗೆ, ಬಿಸಿಲು ನಾಡಿನ ಬುಗ್ಗೆಗಳು, ನೆಲದ ಮರೆಯ ನಿಧಾನ ಮುಂತಾದ 30ಕ್ಕೂ ಹೆಚ್ಚು ಕೃತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ಸಾಹಿತಿ ಹೊನ್ಕಲ್ ಅವರ ಅನೇಕ ಕವನಗಳು, ಲೇಖನಗಳು, ಲಲಿತಾ ಪ್ರಬಂಧಗಳು, ಕಥೆಗಳು ನಾಡಿನ ಸಣ್ಣ ಪತ್ರಿಕೆಯಿಂದ ಹಿಡಿದು ಸಂಕ್ರಮಣ, ಹಾಯ್ ಬೆಂಗಳೂರು ವಿವಿಧ ಪ್ತರಿಕೆಗಳಲ್ಲಿ ಪ್ರಕಟಗೊಂಡಿದೆ. ಇವರ ಪ್ರವಾಸ ಕಥನ ಹಾಗೂ ಲಲಿತ ಪ್ರಬಂಧಗಳು ಕೊಲ್ಹಾಪೂರ ವಿಶ್ವವಿದ್ಯಾಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ಮಾತಕೋತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಭೋಧಿಸಲ್ಪಟಿದೆ.

ಹೊನ್ಕಲ್ ಅವರ ಸಾಹಿತ್ಯ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲದಿಂದ ರಾಜ್ಯೋತ್ಸವ ಪ್ರಶಸ್ತಿ, ರಾಜಪುರೋಹಿತ ಚಿನ್ನದ ಪದಕ, ಶ್ರೀವಿಜಯ ಪ್ರಶಸ್ತಿ, ಅಮ್ಮ ಗೌರವ ಪ್ರಶಸ್ತಿ, ಸಂಚಯ ಸಂಕ್ರಮಣ ಪ್ರಶಸ್ತಿ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಅಲ್ಲದೆ ಯಾದಗಿರಿ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು ಶಹಾಪುರ ತಾಲೂಕ 2ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. 4 ಸಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ, ದೇಹಲಿಯಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ, ಮೈಸೂರ ದಸರಾ ಕವಿಗೋಷ್ಠಿಯಲ್ಲಿ, ರಾಜ್ಯಮಟ್ಟದ ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನವಾಚನ ಮಾಡಿದಾರೆ.

ತರುಣ ಬರಹಗಾರರಿಗೆ ಮುನ್ನಡಿ, ಬೆನ್ನುಡಿ ಬರೆದು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ. ಒಬ್ಬ ಅತ್ಯತ್ತಮ ಸಮಾಜಶಾಸ್ತ್ರ ಭೋಧಕರು, ಕ್ರೀಯಾಶೀಲ ವ್ಯಕ್ತಿ ಉತ್ಸಾಹ, ಜೀವನ ಪ್ರೀತಿಯ ಮೂಲಕ ಬದುಕಿನೂದ್ದಕ್ಕು ಲವಲವಿಕೆಯನ್ನು ಉಳಿಸಿಕೊಂಡವರು.

ಕಳೆದ ಹಲವು ದಶಕಗಳಿಂದ ಸೃಜನಾತ್ಮಕ ಬರಹಗಳಲ್ಲಿ ತೊಡಗಿಸಿಕೊಂಡು ಸಾಹಿತಿಕ ಸೇವೆ ಸಲ್ಲಿಸುತ್ತಿರುವ ಸಿದ್ದರಾಮ ಹೊನ್ಕಲ್ ಅವರ ಕಥೆ, ಕವನ, ಲಲಿತ ಪ್ರಬಂಧ, ಪ್ರವಾಸ ಕಥನ, ಹನಿಗವನ ಮುಂತಾದ ಸಾಹಿತ್ಯ ಪ್ರಕಾರದ ಬರಹಗಳನ್ನು ಅವಲೋಕಿಸದಾಗ ಅವರ ಕೃತಿಗಳಲ್ಲಿ ಅನುಭವದ ವಿಸ್ತಾರವಿದೆ.

ಆಳವಾದ ಓದುವಿದೆ. ಸೂಕ್ಷ್ಮ ಸಂವೇದನೆಯೂ ಇದೆ. ಮಾಗಿದ ಮನಸ್ಸಿದೆ. ಸಮಾಜಿಕ ಬದುಕಿನ ವಾಸ್ತವದ ಚಿತ್ರಣಗಳಿವೆ. ಬದುಕನ್ನು ಪ್ರೀತಿಸುವ, ಶೋಧಿಸುವ ಕಾಳಜಿಗಳಿವೆ. ವರ್ತಮಾನದ ಹಲವು ಸಮಸ್ಯೆಗಳಿಗೆ ಸ್ಪಂದನಗಳಿವೆ. ವೈವಿಧ್ಯತೆ ಇದೆ. ಭಿನ್ನ ನಿಲುವುಗಳಿವೆ.

ಆಪ್ತತೆ, ನಿಷ್ಠುರತೆ, ಪ್ರಮಾಣಿಕತೆ, ಹಂಗಿಗೆ ಒಳಗಾಗದ ಸ್ವಾತಂತ್ರ್ಯತೆ, ಸಾಮಾಜಿಕ, ರಾಜಕೀಯ ಬದಲಾವಣೆಗಳಿಗೆ ಆರೋಗ್ಯಕರ ಸ್ಪಂದನವಿದೆ. ವ್ಯಂಗ, ಹಾಸ್ಯ, ವಿಡಂಬನೆಯ ಚಿಕಿತ್ಸಕ ಅಭಿವ್ಯಕ್ತಿಗಳಿಗೆ. ಹೊನ್ಕಲ್ ಅವರ ಒಟ್ಟು ಬರಹಗಳಲ್ಲಿ ಕಥೆಗಾರನಿದ್ದಾನೆ. ಕವಿಯಿದ್ದಾನೆ. ಪ್ರವಾಸಿಗ ಇದ್ದಾನೆ, ತತ್ವವಿಚಾರಗಳಿವೆ. ಚಿಂತನಾಶೀಲತೆವಿದೆ. ಬೆರಗು ಹುಟ್ಟಿಸುವ ಭಾಷಾ ದುಡಿಮೆಯಿದೆ. ಸಾಮಾಜಿಕ ಪ್ರಜ್ಞೆ, ಜನಪರ, ಜೀವಪರ, ಪ್ರಗತಿಪರ ನಿಲುವುಗಳಿವೆ.

ಭೋಗಕ್ಕಾಗಿ ಕಂಡಾಗಲೆಲ್ಲಾ ಮಗನ ತಾರುಣ್ಯ ಹಲವರಿಗೆ ಪಡೆದ ಷಹಜಾನ ಯಯಾತಿ ಮಮತಾಜರ ನಮ್ಮೆಲ್ಲರ ಗಾಢ ಪ್ರೇಮದ ಅಂತರಂಗದ ನೆನಪು ಪ್ರತಿನಿದಿ(ಯಯಾತಿ) ನನಗೆ ಕಲ್ಲುಮಣ್ಣು ಹೊತ್ತು ಕೆತ್ತಿ ಬಸವಳಿದವರ ನೆನಪು (ತಾಜಮಹಲ್) ಮಕ್ಕಳಿಲ್ಲದ ಚಿಂತೆಯಲ್ಲಿ ಮಠಕ್ಕೆ ನಡೆದುಕೊಂಡ ಮಲ್ಲಿಗೆ ಈಗ ಮಠದಪ್ಪಾರಂಥಾವೆ ಮನೆ ತುಂಬ ಮಕ್ಕಳು ಮುಂತಾದ ಹನಿಗವನಗಳಲ್ಲಿ ಗೇಲಿಗಿಂತ, ತಮಾಷೆಗಿಂತ, ಪ್ರೇಮಗೀಮಗಳಿಗಿಂತ ಆತ್ಮ ವಿಮರ್ಶೇಗೆ ಹಚ್ಚುವ ಚಿಂತನೆವಿದೆ.

ಬೀಸು ಹೇಳಿಕೆಗಳಲ್ಲಿ ಸಡಿಲವಾಗದೇ ಸೂಕ್ತವಾದ ಪ್ರತಿಮೆಗಳಲ್ಲಿ ಸಾಂಧ್ರವಾಗುವ ಹೊನ್ಕಲ್ ಅವರ ಹನಿಗವನಗಳು ಸೃಜನಶೀಲ ಪರಿಶ್ರಮದ ಫಲವಾಗಿದೆ. ವರ್ತಮಾನದ ಹಾಗು-ಹೋಗುಗಳಿಗೆ ತೆರದುಕೊಳ್ಳುವ ಅವರ ಬರಹಗಳು ಹಲವಾರು ಸಮಾಜದ ನ್ಯೂನತೆಗಳಿಗೆ ಪ್ರತಿಕ್ರಿಯಿಸುತ್ತವೆ, ಮುಖಾಮುಖಿಯಾಗುತ್ತವೆ.

ಸಗರನಾಡಿನ ಮತ್ತು ಹೈದ್ರಾಬಾದ ಕರ್ನಾಟಕ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಕೃಷಿಯ ಕಾರ್ಯಚಟುವಟಿಕೆಗಳಲ್ಲಿ ಸಿದ್ದರಾಮ ಹೊನ್ಕಲ್ ಅವರದು ಸಿಂಹಪಾಲು ಎಂದು ಹೇಳಿದರೆ ತಪ್ಪಾಗಲಾರದು. ವೃತ್ತಿಯಲ್ಲಿ ಆರೋಗ್ಯ ಇಲಾಖೆಯ ಸಮಾಜಶಾಸ್ತ್ರ ಭೋಧಕರಾದರೂ ಸಾಹಿತ್ಯವನ್ನೆ ತಮ್ಮ ಮೊದಲ ಆಸಕ್ತಿಯನ್ನಾಗಿ ಉಳಿಸಿಕೊಂಡಿರುವ ಹೊನ್ಕಲ್ ಅವರು ಬರೆಯವ ಕಾಯಕಕ್ಕೆ ಯಾವ ಕಾರಣದಿಂದಲೂ ಮುಜುಗರ ಮಾಡಿಕೊಂಡಿಲ್ಲ.

ನಾಡಿನ ಪ್ರಮುಖ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಚಂಪಾ, ಚೆನ್ನಣ್ಣ ವಾಲಿಕರ ಮುಂತಾದವರ ಒಡನಾಟದಲ್ಲಿರುವ ಅವರು ಹಿರಿಯ ಸಾಹಿತಿಗಳ ಪ್ರಂಶಸನಿಯಕ್ಕೆ ಪಾತ್ರರಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಎಮ್.ಫಿಲ್ ಮತ್ತು ಡಾಕ್ಟರೇಟ್ ಪದವಿ ಅಧ್ಯಯನಕ್ಕೆ ಆಕಾರಗಳಾಗಿವೆ.

ನಾನು ತುಂಬಾ ಪ್ರೀತಿಸುವ, ಗೌರವಿಸುವ ಕವಿ, ಲೇಖಕ ಸಿದ್ದರಾಮ ಹೊನ್ಕಲ್ ಅವರು ಸಾಹಿತ್ಯ ಬದುಕನ್ನು ಆಳವಾಗಿ, ಪ್ರಮಾಣಿಕವಾಗಿ ಪ್ರೀತಿಸುತ್ತಲೇ ನಮ್ಮನ್ನು ಇದೇ ದಾರಿಯಲ್ಲಿ ಬರಲು ಪ್ರೋತ್ಸಾಹಿಸಿದವರು. ಯುವಕರ ಉತ್ತಮ ಬರವಣಿಗೆಗೆ, ಓದಿನ ಬಗ್ಗೆ ವಿಶೇಷ ಕಾಳಜಿನಿಟ್ಟುಕೊಂಡವರು.

ಅವರೊಬ್ಬ ಬರಹಗಾರರಾಗಿ, ಸಾಹಿತಿಯಾಗಿ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘಟಕರಾಗಿ, ಪತ್ರಕರ್ತರಾಗಿ ಹೀಗೆ ಹಲವಾರ ರೀತಿಯಲ್ಲಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಸಮಕಾಲಿನ ಸಂಧರ್ಭದಲ್ಲಿ ಸಿದ್ದರಾಮ ಹೊನ್ಕಲ್ ಅವರು ಹೈದ್ರಾಬಾದ ಕರ್ನಾಟಕದ ಸಾಹಿತ್ಯ ಚೇತನ ಎಂದು ಹೇಳಿದರೆ ತಪ್ಪಾಗಲಾರದು.

ಸಾಹಿತ್ಯ ವಲಯದಲ್ಲಿ ಹಲವಾರು ವೈರುದ್ಯತೆಗಳನ್ನು, ಅಸಹನೆಗಳನ್ನು ಪ್ರೀತಿಯಿಂದ ಎದುರಿಸಿರುವ ಸಿದ್ದರಾಮ ಹೊನ್ಕಲ್ ಅವರು ಅನೇಕ ವೈರುದ್ಯ-ವ್ಯಂಗ ವಾತಾವರಣದ ಮಧ್ಯೆ ತಮ್ಮ ಸೂಕ್ಷ್ಮ ಸಂವೇಧನಾಶೀಲ ಆಶಯಗಳನ್ನು ಜತನವಾಗಿಟ್ಟುಕೊಂಡು ಬಂದವರು.

ಸಾಹಿತ್ಯ ಸಂಸ್ಕøತಿಯ ಜವಾಬ್ದಾರಿಯನ್ನು ನಿಭಾಯಿಸಿದವರು. ಹೊನ್ಕಲ್ ಅವರ ಸಾಹಿತ್ಯ ಕುರಿತಾಗಿ ಅಕಾಡೆಮಿಕ್ ವಲಯದಲ್ಲಿ ಗಂಭೀರ ಅಧ್ಯಯನ ನಡೆಯಬೇಕು. ಅವರ ಕೃತಿಗಳು ಓದುಗನೊಂದಿಗೆ ಹೆಚ್ಚು ಸಂವಹನವಾಗಬೇಕು. ಅವರು ತಮ್ಮ ಸಾಹಿತ್ಯದ ಮೂಲಕ ಪರಂಪರೆಯ ತಿಳಿವುಗಳನ್ನು ಸಮಕಾಲೀನ ಸಂಧರ್ಭದಲ್ಲಿಟ್ಟು ನೋಡುವ ಅಗತ್ಯವಿದೆ.

ಲೇಖಕ ಸಿದ್ದರಾಮ ಹೊನ್ಕಲ್ ಅವರ ಸಾಹಿತ್ಯ ಕೃಷಿ ಮತ್ತು ಸಾಂಸ್ಕøತಿಕ ಸಂಘಟನೆಯ ಸೇವೆ, ನಾಡು-ನುಡಿಯ ಸೇವೆಗೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕೆಲಸ ಮಾಡಿದವರನ್ನು ಗೌರವಿಸುವುದು ಸಂಪ್ರಾದಾಯವೆಂದು ಭಾವಿಸಿರುವ ನಮ್ಮ ಸಂಸ್ಕøತಿಗೆ ಇದು ಸಾಕ್ಷಿ ಒದಗಿಸುತ್ತದೆ.

ನಾಡಿನ ಬಹುಮುಖ ಪ್ರತಿಭೆಯ ಕವಿ ಲೇಖಕ ಸಿದ್ದರಾಮ ಹೊನ್ಕಲ್ ಅವರಿಂದ ಇನ್ನೂ ಹೆಚ್ಚು ಮೌಲಿಕ ಕೃತಿಗಳು ಮೂಡಿಬರಲಿ ಅವರು ನಾಡಿನ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದಲ್ಲಿ ವಿಶಿಷ್ಟ ಕಾಣಿಕೆಯಾಗಲಿ, ಇನ್ನೂ ಎತ್ತರಕ್ಕೆ ಬೆಳೆಯಲಿ ಮತ್ತು ಉನ್ನತ ಸ್ಥಾನಮಾನಗಳು ದೊರೆಯಲಿ ಎಂದು ಆಶಿಸೋಣ.

ರಾಘವೇಂದ್ರ ಹಾರಣಗೇರಾ

ಸಮಾಜಶಾಸ್ತ್ರ ಉಪನ್ಯಾಸಕರು.

ಬಾಪೂಗೌಡ ದರ್ಶನಾಪೂರ ಸ್ಮಾರಕ

ಮಹಿಳಾ ಪದವಿ ಕಾಲೇಜು ಶಹಾಪುರ.

ಮೊ|| 9901559873.

Related Articles

Leave a Reply

Your email address will not be published. Required fields are marked *

Back to top button