ಪ್ರಮುಖ ಸುದ್ದಿ

ವಿಜ್ಞಾನಿ ಸೋಮಶೇಖರ ಅವರ ಮೃತದೇಹ ಪತ್ತೆ

ಮೈಸೂರು : ನಿನ್ನೆ ಚುಂಚನಕಟ್ಟೆ ಜಲಪಾತ ವೀಕ್ಷಣೆಗೆ ಬಂದಿದ್ದ ಸಿಎಫ್ ಟಿಆರ್ ಐ ಹಿರಿಯ ವಿಜ್ಞಾನಿ ಸೋಮಶೇಖರ್ (40) ನೀರುಪಾಲಾದ ಘಟನೆ ನಡೆದಿತ್ತು. ಕುಟುಂಬದ ಜೊತೆಗೆ ಜಲಪಾತ ವೀಕ್ಷಣೆಗೆ ಬಂದಿರುವ ವೇಳೆ ಪತ್ನಿ ಮತ್ತು ಮಕ್ಕಳ ಎದುರೇ ನೀರಿನಲ್ಲಿ ಕೊಚ್ಚಿಹೋದ ಹೃದಯ ವಿದ್ರಾವಕ ಘಟನೆ ವರದಿಯಾಗಿತ್ತು.

ನೀರಿಗಿಳಿದು ಆಟಕ್ಕೆ ನಿಂತಾಗ ಏಕಾಏಕಿ ನೀರನ ಮಟ್ಟ ಹೆಚ್ಚಳವಾಗಿದ್ದು ಸೋಮಶೇಖರ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ನೀರಿನ ರಭಸಕ್ಕೆ  ಸಿಲುಕಿದ್ದರು. ಈ ವೇಳೆ ಸ್ಥಳೀಯರು ಮೂವರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರು. ಆದರೆ, ಸೋಮಶೇಖರ್ ಮಾತ್ರ ನೀರಿನ ಹೊಡೆತಕ್ಕೆ ಸಿಲುಕಿ ನೀರುಪಾಲಾಗಿದ್ದರು. ಇಂದು ಬೆಳಗ್ಗೆ ಸೋಮಶೇಖರ್ ಅವರ ಮೃತದೇಹ ಪತ್ತೆ ಆಗಿದೆ ಎಂದು ತಿಳಿದುಬಂದಿದೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button