ಪ್ರಮುಖ ಸುದ್ದಿ

ಯಾದಗಿರಿಃ ಮಂಗಳಮುಖಿಯರಿಂದ ಪ್ರತಿಭಟನೆ

ಮಂಗಳಮುಖಿಯರಿಂದ ಪ್ರತಿಭಟನೆ

ಯಾದಗಿರಿಃ ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯುವಂತೆ ಆಗ್ರಹಿಸಿ ಮಂಗಳಮುಖಿಯರಿಂದ ನಗರದ ಸುಭಾಶ ಚಂದ್ರ ವೃತ್ತದ ಬಳಿ ಪ್ರತಿಭಟನೆ ಜರುಗಿತು.

ಲೋಕಸಭೆಯಲ್ಲಿ‌ ಮಂಜೂರಾದ ಟ್ರಾನ್ಸ್ ಜೆಂಡರ್ ಬಿಲ್ ರಾಜ್ಯಸಭೆಗೆ ಕಳುಹಿಸುವ ಮುನ್ನ ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.

ಸುಭಾಷ್ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರ‌್ಯಾಲಿ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಮಂಗಳಮುಖಿಯರನ್ನು ಕೀಳರಿಮೆಯಿಂದ ನೋಡಬೇಡಿ. ನಾವು ಮನುಷ್ಯರೇ ನಮಗೂ ಜೀವ ಇದೆ.

ಶಿಕ್ಷಣ, ಉದ್ಯೋಗ, ಇನ್ನಿತರೆ ಸವಲತ್ತು ಕಲ್ಪಿಸುವ ಮೂಲಕ ಉತ್ತಮ‌ ಬದುಕು‌ ನಡೆಸಲು ಅವಕಾಶ ನೀಡಬೇಕು ಎಂದು‌ ಪ್ರತಿಭಟನಾನಿರತರು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಸಮಿತಿ ಸದಸ್ಯರು ಹಾಗೂ ರೈತ ಸಂಘಟನೆ ಮುಖಂಡರು ಹಾಗೂ ಮಹಿಳೆಯರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button