ಮುಳ್ಳುಕಂಟಿಯಲ್ಲಿ ಹೆಣ್ಣು ಹಸುಗೂಸು ಪತ್ತೆ
ಮುಳ್ಳುಕಂಟಿಯಲ್ಲಿ ಹೆಣ್ಣು ಹಸುಗೂಸು ಪತ್ತೆ
ಯಾದಗಿರಿಃ ಮುಳ್ಳುಕಂಟಿಯಲ್ಲಿ ಹೆಣ್ಣು ಹಸುಗೂಸೊಂದು ಪತಗತೆಯಾದ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ವಂಕಸಂಬ್ರ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದ ಗ್ರಾಮಸ್ಥರು ಹಸುಗೂಸೊಂದು ಅಳುವ ಧ್ವನಿ ಕೇಳಿ ಹುಡುಕಾಟ ನಡೆಸಿದ್ದು, ಅಲ್ಲಿಯೇ ಸಮೀಪದ ಮುಳ್ಳು ಕಂಟಿ ಪೊದೆಯಲ್ಲಿ ಹೆಣ್ಣು ಹಸುಗೂಸೊಂದು ಎಸೆದಿರುವದನ್ನು ಕಂಡು ತಕ್ಷಣ ಮಗುವಿನ ರಕ್ಷಣೆ ಮಾಡುವದಲ್ಲದೆ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಲಾಗಿದೆ.
ಬಹುಷ ನಿನ್ನೆ ಬೆಳಗಿನ ಜಾವ ಅಥವಾ ರಾತ್ರಿ ಸಮಯದಲ್ಲಿ ಗ್ರಾಮದ ಹೊರವಲಯದ ಮುಳ್ಳುಕಂಟಿ ಪೊದೆಯಲ್ಲಿ ಹಸುಗೂಸೊಂದು ಯಾರೋ ಪಾಲಕರು ಹೆಣ್ಣು ಮಗು ಹುಟ್ಟಿದೆ ಎಂಬ ಜಿಗುಪ್ಸೆ ಯಿಂದ ಎಸೆದಿರುವ ಶಂಕೆಯನ್ನು ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಆದರೆ ಗ್ರಾಮಸ್ಥರು ಮಗು ಎಸೆದಿರುವ ಪಾಲಕರಿಗೆ ಇಡಿ ಶಾಪ ಹಾಕಿದ್ದು, ಹೃದಯ ವಿದ್ರಾಕ ಘಟನೆಯಿಂದ ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಾಯಿ, ಹಂದಿಗಳ ಬಾಯಿಗೆ ಈ ಮಗು ಆಹಾರವಾಗುತಿತ್ತು,, ಪುಣ್ಯಕ್ಕೆ ಮಗುವಿನ ಅಳು ಕೇಳಿದವರು ಅದರ ರಕ್ಷಣೆಗೆ ಮುಂದಾಗಿ. ಮಗುವಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡೆಸಿದ್ದಾರೆ. ಸೈದಾಪುರ ಪೊಲೀಸ್ ಠಾಣೆವ್ಯಾಪ್ತಿ ಈಘಟನೆ ನಡೆದಿದೆ.