ಪ್ರಮುಖ ಸುದ್ದಿ

ಯುಪಿ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕೋಮವಾದಿ ಸರ್ಕಾರದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆಃ ಆರೋಪ

yadgiri, ಶಹಾಪುರಃ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೋಮವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆ ಬೆಳಗ್ಗೆ ಚರಬಸವೇಶ್ವರ ಕಮಾನ್‍ದಿಂದ ನಗರದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ವೃತ್ತದಲ್ಲಿ ಅನಾವರಣಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶರಣಪ್ಪ ಸಲಾದಪುರ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸಿಎಂ ಆದ ಮೇಲೆ ಅತಿ ಹೆಚ್ಚು ಕೋಮುವಾದಿ ಘಟನೆಗಳು, ಮಹಿಳೆಯರ ಮೇಲೆ ಅತ್ಯಾಚಾರ, ಯುವತಿಯರ ಮಾನಭಂಗ, ಕೊಲೆ ಸುಲಿಗೆ ಹೆಚ್ಚಾಗಿವೆ. ಸಮರ್ಪಕ ಆಡಳಿತ ನಡೆಸುವಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ. ಕಾರಣ ಸಿಎಂ ಆದಿತ್ಯನಾಥ ಕೂಡಲೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಅಲ್ಲದೆ ಯುಪಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ರಾಮರಾಜ್ಯದ ಕನಸು ಕಾಣುವ ಹೇಳುವ ಬಿಜೆಪಿ ಸರ್ಕಾರದ ಆಡಳಕಿತದಲ್ಲಿ ಬಡಿ ಭ್ರಷ್ಟಚಾರ, ಕೊಲೆ ಸುಳಿಗೆ, ಹಿಂದುಳಿದ, ದಲಿತ ಅಲ್ಪಸಂಖ್ಯಾತ ಬಂಧುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ದೂರಿದರು.

ಹತ್ರಾಸ್ ನಲ್ಲಿ ದಲಿತ ಯುವತಿಯೋರ್ವಳ ಮೇಲೆ ನಾಲ್ಕು ಜನರ ಗುಂಪೊಂದು ಅತ್ಯಾಚಾರ ಎಸಗಿ, ನಾಲಿಗೆ ಕತ್ತರಿಸಿ, ಯುವತಿಯ ಬೆನ್ನುಮೂಳೆ ಮುರಿದು ಕ್ರೌರ್ಯ ಮೆರೆದಿದ್ದಾರೆ. ಇದು ಅಮಾನೀಯವಾದದು, ಪೈಶಾಚಿಕವಾಗಿ ಗತ್ಯೆ ಮಾಡಲಾಗಿದೆ. ಇಡಿ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕಾರ್ಯ ಮಾಡಿದ್ದು, ಕೂಡಲೇ ಕೇಂದ್ರ ಸರ್ಕಾರ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರುಪಡಿಸಬೇಕು. ಅಲ್ಲದೆ ಇಂತಹ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಿರಿಯ ವಕೀಲ ಆರ್.ಚನ್ನಬಸು ಮಾತನಾಡಿ, ಭಾರತದಲ್ಲಿ ಹೆಣ್ಣು ಮಕ್ಕಳನ್ನು ಗೌರವಯುತವಾಗಿ ಕಾಣಲಾಗುತ್ತದೆ. ಆದರೆ ಹಣಬಲ, ಅಧಿಕಾರದ ಬಲ ಅಮಲಿನಲ್ಲಿರುವ ನೀಚರು ಇಂಥ ಕೃತ್ಯ ಎಸಗುತ್ತಾರೆ. ಇಂತಃ ಘಟನೆಗಳು ಒಂದಾದ ಮೇಲೆ ಒಂದು ಎನ್ನುವಂತೆ ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಆಕಬೇಕಿದ್ದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಡುಹಗಲೇ ಇಂತಹ ಕೃತ್ಯಗಳು ನಡೆಯುತ್ತಿದ್ದು, ಸರ್ಕಾರ ಕೊಲೆಗಡುಕರ ಪರ ನಿಲ್ಲುವದು ಅಂತ್ಯತ ದುರದುಷ್ಟಕರ. ಮೊದಲು ಯುಪಿ ಸರ್ಕಾರ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆಸಿದ ಅತ್ಯಾಚಾರ, ಕೊಲೆಗಡುಕರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಸಮರ್ಪಕ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹಣಮಂತ್ರಾಯ ದೊರೆ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಅಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಸಯ್ಯದ್ ಖಾಲಿದ್, ಪಿಎಫ್‍ಐ ಇಲ್ಲಾಧ್ಯಕ್ಷ ಮುಕ್ತಾರ್ ಅಹ್ಮದ್, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಭೀಮಣ್ಣ ಮೇಟಿ, ವಿಠಲ್ ವಗ್ಗಿ, ಶಿವಕುಮಾರ ತಳವಾರ, ರಾಯಪ್ಪ ಸಾಲಿಮನಿ, ಶಾಂತಪ್ಪ ಹಾರಣಗೇರಾ, ಮಹಾದೇವ ದಿಗ್ಗಿ, ನಿಜಗುಣ ದೋರನಹಳ್ಳಿ, ಶರಣು ದೋರನಹಳ್ಳಿ, ಮಹಿಬೂಬ್ ಗೋಗಿ, ಶರಣರಡ್ಡಿ ಹತ್ತಿಗೂಡೂರ ಸೇರಿದಂತೆ ಇತರರು ಭಾಗವಹಿಸಿದ್ದರು. ಕೊನೆಯಲ್ಲಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button