ಪ್ರಮುಖ ಸುದ್ದಿ
ಬೀದರಃ ಮರದಡಿಯಲ್ಲಿ ಯುವತಿ ಶವ ಪತ್ತೆ- ಕೊಲೆ ಶಂಕೆ
ಬೀದರಃ ಯುವತಿಯೊಬ್ಬಳನ್ನು ಮರದಡಿಯಲ್ಲಿ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ತಾಲೂಕಿನ ಶಿವಾರದಲ್ಲಿ ನಡೆದಿದೆ.
ಗಿಡದ ಬಡ್ಡಿಗೆ ಆಕೆಯ ಓಣಿಯಿಂದಲೇ ಕಟ್ಟಿ ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಈ ಘಟನೆಯಲ್ಲಿ ನಡೆದಿದೆ ಎಂದು ಸಂಶಯ ವ್ಯಕ್ತವಾಗಿದೆ.
ಆದರೆ ಯುವತಿ ಶವದ ಸ್ಥಿತಿ ನೋಡಿದರೆ ಕೊಲೆ ಮಾಡಿರುವ ಶಂಕೆ ಮೇಲ್ನೊಟಕ್ಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಮೃತ ಯುವತಿಯನ್ನು ಮಹೇಶ್ವರಿ ಕಲ್ಯಾಣರಾವ್ (25) ಎಂದು ಗುರುತಿಸಲಾಗಿದೆ.
ಆಕೆ ಮಲ್ಕಾಪುರ ಗ್ರಾಮದವರೆನ್ನಲಾಗಿದ್ದು, ಪ್ರಸ್ತುತ ಚಿಟ್ಟವಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಯುವತಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ ಇಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.