ಪ್ರಮುಖ ಸುದ್ದಿ

ಮೂರು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಅಂತಿಮ

ರಾಜಾ ಅಮರೇಶ ನಾಯಕಗೆ ಬಿಜೆಪಿ ಟಿಕೆಟ್

ಬೆಂಗಳೂರಃ ರಾಜ್ಯದ‌ ಚಿಕ್ಕೋಡಿ, ಕೊಪ್ಪಳ ಮತ್ತು‌ ರಾಯಚೂರ ಈ ಮೂರು ಲೋಕಾಸಭೆ‌ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿ ಘಟಕ ಇದೀಗ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಸುದ್ದಿ ಹೊರಬಿದ್ದಿದೆ.

ಚಿಕ್ಕೋಡಿ ಲೋಕಾಸಭೆ ಅಣ್ಣಾಸಾಹೇಬ್ ಜೊಲ್ಲೆ, ಕೊಪ್ಪಳ-ಸಂಗಣ್ಣ ಕರಡಿ ಮತ್ತು ರಾಯಚೂರ- ರಾಜಾ ಅಮರೇಶ ನಾಯಕ‌ ಹೆಸರು‌ ಅಂತಿಮ ಮುದ್ರೆ ಒತ್ತಲಾಗಿದೆ ಎಂದು ರಾಜ್ಯ ಘಕಟ‌ ಪದಾಧಿಕಾರಿಗಳು‌ ತಿಳಿಸಿದ್ದಾರೆ.

ರಾಯಚೂರು ಲೋಕಾಸಭೆ ಸೇರಿದಂತೆ ಇತರೆ‌ ಕ್ಷೇತ್ರದ  ಟಿಕೆಟ್ ಆಕಾಂಕ್ಣಿಗಳ‌ ನಡುವೆ ತೀವ್ರ ಪೈಪೊಟಿ ನಡೆದಿದ್ದು, ಅಂತಿಮ ಈ ಮುರೂ ಕ್ಷೇತ್ರಗಳ‌ ಅಂತಿಮ ಹೆಸರು ಪ್ರಕಟಿಸಲಾಗಿದೆ.

ರಾಯಚೂರು ಕ್ಷೇತ್ರಕ್ಕೆ ರಾಜಾ ಅಮರೇಶ ನಾಯಕ‌ ಎದುರು ಸ್ಥಳೀಯ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ ತೀವ್ರ ಪೈಪೋಟಿ ನಡೆಸಿದ್ದರು. ಪ್ರಬಲ ಆಕಾಂಕ್ಷಿ‌ಯಾಗಿದ್ದ, ಅವರ ಮುಂದಿನ ನಡೆ ಏನು ಎಂಬುದನ್ನು ತಿಳಿಯಲು ಕಾಯಬೇಕಷ್ಟೆ.

Related Articles

Leave a Reply

Your email address will not be published. Required fields are marked *

Back to top button