ಪ್ರಮುಖ ಸುದ್ದಿ
ಮೂರು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಅಂತಿಮ
ರಾಜಾ ಅಮರೇಶ ನಾಯಕಗೆ ಬಿಜೆಪಿ ಟಿಕೆಟ್
ಬೆಂಗಳೂರಃ ರಾಜ್ಯದ ಚಿಕ್ಕೋಡಿ, ಕೊಪ್ಪಳ ಮತ್ತು ರಾಯಚೂರ ಈ ಮೂರು ಲೋಕಾಸಭೆ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿ ಘಟಕ ಇದೀಗ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಸುದ್ದಿ ಹೊರಬಿದ್ದಿದೆ.
ಚಿಕ್ಕೋಡಿ ಲೋಕಾಸಭೆ ಅಣ್ಣಾಸಾಹೇಬ್ ಜೊಲ್ಲೆ, ಕೊಪ್ಪಳ-ಸಂಗಣ್ಣ ಕರಡಿ ಮತ್ತು ರಾಯಚೂರ- ರಾಜಾ ಅಮರೇಶ ನಾಯಕ ಹೆಸರು ಅಂತಿಮ ಮುದ್ರೆ ಒತ್ತಲಾಗಿದೆ ಎಂದು ರಾಜ್ಯ ಘಕಟ ಪದಾಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು ಲೋಕಾಸಭೆ ಸೇರಿದಂತೆ ಇತರೆ ಕ್ಷೇತ್ರದ ಟಿಕೆಟ್ ಆಕಾಂಕ್ಣಿಗಳ ನಡುವೆ ತೀವ್ರ ಪೈಪೊಟಿ ನಡೆದಿದ್ದು, ಅಂತಿಮ ಈ ಮುರೂ ಕ್ಷೇತ್ರಗಳ ಅಂತಿಮ ಹೆಸರು ಪ್ರಕಟಿಸಲಾಗಿದೆ.
ರಾಯಚೂರು ಕ್ಷೇತ್ರಕ್ಕೆ ರಾಜಾ ಅಮರೇಶ ನಾಯಕ ಎದುರು ಸ್ಥಳೀಯ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ ತೀವ್ರ ಪೈಪೋಟಿ ನಡೆಸಿದ್ದರು. ಪ್ರಬಲ ಆಕಾಂಕ್ಷಿಯಾಗಿದ್ದ, ಅವರ ಮುಂದಿನ ನಡೆ ಏನು ಎಂಬುದನ್ನು ತಿಳಿಯಲು ಕಾಯಬೇಕಷ್ಟೆ.