ವಿಜಯಪುರದಲ್ಲಿ ಗ್ಯಾಂಗ್ ರೇಪ್ & ಮರ್ಡರ್ ಕೇಸ್ : ವಿವಿಧ ಸಂಘಟನೆಗಳಿಂದ ವ್ಯಾಪಕ ಖಂಡನೆ
ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಆಕ್ರೋಶ
ಯಾದಗಿರಿಃ ವಿಜಯಪುರದಲ್ಲಿ ನಡೆದ ಗ್ಯಾಂಗ್ ರೇಪ್ ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಯಾದಗಿರಿ, ಶಹಾಪುರ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ವ್ಯಾಪಕ ಖಂಡನೆ ವ್ಯಕ್ತಪಡಿಸಿದವು.
ವಿಜಯಪುರ ಗ್ಯಾಂಗ್ ರೇಪ್ ಘಟನೆ ಖಂಡಿಸಿ ನಗರದ ಚರಬಸವೇಶ್ವರ ಕಮಾನದಿಂದ ಬಿಎಸ್ಪಿ, ಕದಸಂಸಮಿತಿ ಮತ್ತು ಬಿವಿಎಸ್ ಹಾಗೂ ಎಸ್ಡಿಪಿಐ, ಪಾಪ್ಯುಲರ್ ಫ್ರಂಟ್ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿದವು.
ಶಹಾಪುರ ಎಬಿವಿಪಿ ನಗರ ಶಾಖೆವತಿಯಿಂದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿತ ಬಂಧನಕ್ಕೆ ಒತ್ತಾಯಿಸಿದರು.
ಅದೇ ರೀತಿ ಯಾದಗಿರಿ ನಗರದಲ್ಲೂ ಪ್ರತಿಭಟನೆಗಳು ಜರುಗಿದವು. ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದು ಇಡಿ ರಾಜ್ಯದ ನಾಗರಿಕರು ತಲೆ ತಗಿಸುವಂತೆ ಮಾಡಿದೆ. ರಾಜ್ಯ ಸರ್ಕಾರ ಇಂತಹ ಘಟನೆಗಳಿಗೆ ಆಸ್ಪದೆ ನೀಡದೆ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಹಲವಾರು ಸಂಘಟನೆಗಳ ಆಗ್ರಹಿಸಿವೆ.
ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಸುಲಿಗೆಯಂತಹ ಘಟನೆಗಳು ನಿರಂತರ ನಡೆಯುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು. ರಾಜ್ಯಧಾನಿ ಬೆಂಗಳೂರ ಸೇರಿದಂತೆ ವಿವಿಧ ನಗರಪ್ರದೇಶದಲ್ಲಿ ಅತ್ಯಾಚಾರ. ಕೊಲೆ, ದಬ್ಬಾಳಕೆಯಂತಹ ಘಟನೆಗಳು ಜಾಸ್ತಿಯಾಗಿವೆ. ಕೂಡಲೇ ಗೃಹ ಇಲಾಖೆ ಇಂತಹವುಗಳಿಗೆ ಮಟ್ಟ ಹಾಕಬೇಕಿದೆ. ಇಲ್ಲವಾದಲ್ಲಿ ಮಹಿಳೆಯರು ಹಗಲ್ಲೂ ಹೊರಬರಲು ಆತಂಕ ವ್ಯಕ್ತಪಡಿಸುವಂತಾಗಿದೆ ಎಂದು ಪರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೃಹ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇಡಿ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಆರೋಪಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ದಲಿತ ಮುಖಂಡ ಶಿವಕುಮಾರ ತಳವಾರ, ಸೈಯದ್ ಖಾಲಿದ್, ಶಿವಪುತ್ರ ಜವಳಿ, ಅಜಯ ಯಳಸಂಗಿಕರ್, ಸಿದ್ದಣ್ಣ ಪೂಜಾರಿ, ದಾವಲಸಾಬ್ ಸೈದಾಪುರ, ನಾಗರಾಜ ಬೀರನೂರ, ಗುರುಲಿಂಗಪ್ಪ ತಳಗೇರಿ, ಭೀಮರಾಯ ದೋರನಹಳ್ಳಿ, ಚಿದಾನಂದ ಬಡಿಗೇರ, ಚಂದ್ರಶೇಖರ ಕರುಣಾ, ಕೆ.ಎಂ.ಪಾಷಾ, ಮಹ್ಮದ್ ಮೈಬೂಬ ಗೋಗಿ, ಮಹ್ಮದ್ ಆಸ್ಕರ್, ನವೀದ ಚಾಂದ್, ಮುನೀರ್ ಭಾಗವಾನ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಅದೇ ರೀತಿ ಎಬಿವಿಪಿ ವತಿಯಿಂದ ತಹಸೀಲ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಅರವಿಂದ ಉಪ್ಪಿನ್, ಮಲ್ಲಿಕಾರ್ಜುನ ಜಾಕಾ, ಬಸವರಾಜ ಗುತ್ತೇದಾರ, ಪವನ ಘವಳಕರ, ಮಲ್ಲು ಕೊಂಕಲ್, ರಾಜು ಪಾಲ್ಕಿ, ರಾಘು ಹುಣಸಿಗಿಡ, ಅಭಿಷೇಕ ಪತ್ತಾರ, ಪರಮಾನಂದ ಇಂಗಳಗಿ, ಮಲ್ಲು ಬಳಬಟ್ಟಿ, ಮೌನೇಶ ನಡೇಕರ, ರಂಗನಾಥ ದೇವದುರ್ಗ, ಬಾಸ್ಕರ್ ಕುಲಕರ್ಣಿ, ಅಮರ ಕುಲಕರ್ಣಿ, ಪ್ರಭು ಹಳಿಮನಿ ಮತ್ತು ಅಂಕುಶ ರಾಠೋಡ ಸೇರಿದಂತೆ ಇತರರಿದ್ದರು.