ಪ್ರಮುಖ ಸುದ್ದಿ

ಸೂರ್ಯ ಗ್ರಹಣಃ ಬಿಕೋ ಎನ್ನುತ್ತಿರುವ ರಸ್ತೆಗಳು, ಮಂದಿರಗಳಿಗೆ ಬೀಗ

ಸೂರ್ಯ ಗ್ರಹಣಃ ಬಿಕೋ ಎನ್ನುತ್ತಿರುವ ರಸ್ತೆಗಳು, ಮಂದಿರಗಳಿಗೆ ಬೀಗ

ವಿವಿ‌ಡೆಸ್ಕ್ಃ ಕಂಕಣ ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಬಹುತೇಕ ಕಡೆ ಜನರು ಹೊರಗಡೆ ಬರುತ್ತಿಲ್ಲ. ಹಲವಡೆ ಮಕ್ಕಳನ್ನು ಸಹ ಶಾಲೆಗೆ ಕಳುಹಿಸಲಾಗಿಲ್ಲ ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತವೆ.

ಅಲ್ಲದೆ ಬಹುತೇ ಮಂದಿರಗಳಿಗೆ ಬೀಗ ಹಾಕಲಾಗಿದೆ. ಗ್ರಹಣದ ನಂತರ ಮಂದಿರಗಳ ಬೀಗ ತೆಗೆದು ಇಡಿ ದೇವಸ್ಥಾನ‌ ನೀರಿನಿಂದ ಶುದ್ಧೀಕರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ.

ಅದರಂತೆ ಜನರು ಸಹ ಗ್ರಹಣದ ನಂತರ ತಮ್ಮ ತಮ್ಮ ಮನೆ ಸ್ವಚ್ಛಗೊಳಿಸಿ, ಮನೆಯಲ್ಲಿನ ದೇವರ ಕೋಣೆ ತೊಳೆದು ತಾವು ಸ್ನಾನಾದಿಗಳನ್ನು ಮುಗಿಸಿ‌ ಪೂಜೆ ಸಲ್ಲಿಸಿಯೇ ನಂತರ ಆಹಾರ ಪದಾರ್ಥಗಳನ್ನು ತಯಾರಿಸಿ ಊಟ ಮಾಡುವ ಪದ್ಧತಿ ಅನುಸರಿಸುತಗತಿದ್ದಾರೆ.

ಇನ್ನೂ‌ ಹಲವರು ಗ್ರಹಣದ ಬಗ್ಗೆ ತಲೆ ಕೆಡಿಸಿಕೊಳ್ಳದವರು ಎಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಆದರೆ‌ ಈ ಗ್ರಹಣದ ಭಯ ಹೆಚ್ವಿನವರಲ್ಲಿ ಕಂಡು ಬಂದಿದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button