ಪ್ರಮುಖ ಸುದ್ದಿ
ಆನೆಕಾಲು ಔಷಧಿ ಸೇವನೆ ಮಕ್ಕಳು ಅಸ್ವಸ್ಥ
ಯಾದಗಿರಿಃ ಆರೋಗ್ಯ ಇಲಾಕೆ ಸಿಬ್ಬಂದಿ ಆನೆಕಾಲು ರೋಗ ತಡೆಗೆ ಶಾಲಾ ಮಕ್ಕಳಿಗೆ ನೀಡಿದ್ದ ಔಷಧಿ (ಗುಳಗಿ) ಸೇವಿಸಿ ಸಂಜೆ ವೇಳೆಗೆ ಅಸ್ವಸ್ಥಗೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ರಾಮ ಸಮುದ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬುಧವಾರ ಮಧ್ಯಾಹ್ನ ಊಟದ ನಂತರ ಶಾಲಾ ಮಕ್ಕಳಿಗೆ ಆನೆರೋಗ ತಡೆಗೆ ಮದ್ದು ನೀಡಲಾಗಿತ್ತು.
ಎಲ್ಲಾ ಮಕ್ಕಳು ಊಟದ ನಂತರ ಸೇವನೆ ಮಾಡಿದ್ದರು. ಇದರಲ್ಲಿ 8 ಜನ ಮಕ್ಕಳು ಅಸ್ವಸ್ಥಗೊಂಡಿದ್ದು, ಸೂಕ್ತ ಚಿಕಿತ್ಸೆಗೆ ಯಾದಗಿರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಸ್ವಸ್ಥರಾದ ಎಂಟು ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.