ಪ್ರಮುಖ ಸುದ್ದಿ

ಶಹಾಪುರಕ್ಕೆ ಮೋಡ ಬಿತ್ತನೆ ಭಾಗ್ಯ: ಸಚಿವ ಎಚ್.ಕೆ.ಪಾಟೀಲ್

ಶಹಾಪುರಕ್ಕೆ ಮೋಡ ಬಿತ್ತನೆ ಭಾಗ್ಯ: ಸಚಿವ ಎಚ್.ಕೆ.ಪಾಟೀಲ್

ಧಾರವಾಡಃ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮುಂದಿನ ವಾರದಿಂದ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ನಗರಕ್ಕೆ ಆಗಮಿಸಿದ ಸಚಿವರು, ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಈಗಾಗಲೇ ರೆಡಾರ್‍ಗಳು ಬಂದಿದ್ದು, ಅವು ಬೆಂಗಳೂರಿನಲ್ಲಿವೆ. ಮಳೆ ಅಭಾವ ನಿಯಂತ್ರಣಕ್ಕೆ ಮೋಡ ಬಿತ್ತನೆ ಗುರಿ ಹೊಂದಿದ್ದು, ರಾಜ್ಯದ ಶಹಾಪುರ, ಗದಗ ಮತ್ತು ಬೆಂಗಳೂರಿನಲ್ಲಿ ರೆಡಾರಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಮತ್ತು ಅದಕ್ಕಾಗಿ ಬೇಕಾದ ಎರಡು ವಿಮಾನಗಳ ವ್ಯವಸ್ಥೆಯಾಗಬೇಕಿದೆ. ಪ್ರಸ್ತತ ಒಂದು ವಿಮಾನ ಸಿದ್ಧವಿದ್ದು, ಕೂಡಲೇ ಇನ್ನೊಂದು ವಿಮಾನದ ವ್ಯವಸ್ಥೆ ಮಾಡಿಕೊಂಡು ಮೋಡ ಬಿತ್ತನೆ ಪ್ರಕ್ರೀಯೆ ಆರಂಭಿಸಲಾಗುವುದು.

ಅಲ್ಲದೆ ಮೋಡ ಬಿತ್ತನೆ ಟೆಂಡರ್‍ನ್ನು ಹೊಯ್ಸಳ ಸಂಸ್ಥೆಗೆ ನೀಡಲಾಗಿದ್ದು, ಅಂದಾಜು 35 ಕೋಟೆ ರೂ.ವ್ಯಯಿಸಲಾಗುತ್ತಿದೆ.
ಮಳೆ ಅಭಾವದಿಂದ ರಾಜ್ಯದ ಜನತೆ ಸಾಕಷ್ಟು ನಷ್ಟದಲ್ಲಿದ್ದು, ಅದನ್ನು ಮನಗಂಡು ರಾಜ್ಯ ಸರ್ಕಾರ ಈ ಬಾರಿ ಮೋಡ ಬಿತ್ತನೆಗೆ ಮುಂದಾಗಿದೆ ಎಂದರು.
ಗದಗ, ಬೆಂಗಳೂರ ಸೇರಿದಂತೆ ಸಗರನಾಡಿನ ಶಹಪುರ-ಸುರಪುರ ವಿಭಾಗದಲ್ಲಿ ಮೋಡ ಬಿತ್ತನೆಗೆ ಮುಂದಾಗಿರುವುದು ಹೈಕ ಭಾಗದ ಜನತೆಗೆ ಹರ್ಷ ತಂದಿದೆ.

ಆದರೆ ಮೋಡ ಬಿತ್ತನೆಯಿಂದ ಸಮರ್ಪಕ ಮಳೆ ಅಭಾವ ನೀಗಿಸಲಿದೆಯೋ ಇಲ್ಲ ಎಂಬುದು ಕಾದು ನೋಡಬೇಕು. ಈ ಮೋಡ ಬಿತ್ತನೆ ಭಾಗ್ಯದಿಂದ ಎಷ್ಟು ಅನುಕೂಲವಾಗಲಿದೆ ಎಂಬುದು ಮೋಡ ಬಿತ್ತನೆ ನಂತರವೇ ಗೊತ್ತಾಗಲಿದೆ.

Related Articles

Leave a Reply

Your email address will not be published. Required fields are marked *

Back to top button