ಪ್ರಮುಖ ಸುದ್ದಿ

ಗ್ರಾಮೀಣ ಭಾಗದಲ್ಲಿ ಸೌಲಭ್ಯ ಕಲ್ಪಿಸಲು ಹೋರಾಟ ರೂಪಿಸಿ- ಜಲ್ಲಪ್ಪನೋರ್

ಯಾದಗಿರಿ : ಕನ್ನಡ, ನಾಡು, ನುಡಿ, ಜಲ ರಕ್ಷಣೆಗೆ ಕಾರ್ಯಕರ್ತರು ಸದಾ ಸಿದ್ದರಾಗಿರಬೇಕು, ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಹೋರಾಟ ರೂಪಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಕಾರ್ಯ ನಮ್ಮ ಕಾರ್ಯಕರ್ತರಿಂದಾಗಬೇಕಿದೆ. ಗ್ರಾಮ ಘಟಕಗಳ ಅಧ್ಯಕ್ಷರು ಹೋರಾಟ ರೂಪಿಸಬೇಕಾದರೆ ತಾಲೂಕು ಘಟಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಗಮನಕ್ಕೆ ತರಬೇಕು, ಇದರಿಂದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಯಶಸ್ವಿ ಹೋರಾಟ ಮಾಡಲು ಇನ್ನೂ ಹೆಚ್ಚಿನ ಅನೂಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಲಾರಪ್ಪ ಜಾಗಿರದಾರ, ದಿಲೀಪ್ ಕುಮಾರ ಶೇಠ್, ಮೌನೇಶ ಬೆಳಗೇರಾ, ಬಿರೇಶ ಚಿರತನೂರ, ಮಾರ್ಥಂಡಪ್ಪ ಮುಷ್ಟೂರ, ದೇವಿಂದಪ್ಪ ವಾರಿ, ಆನಂದ ಆಶನಾಳ, ಪಾಂಡು ಅರಿಕೇರಿ, ಮಲ್ಲು ಮಷ್ಕನಳ್ಳಿ, ಚಂದ್ರು ಕಡೆಚೂರ, ಯೋಗೇಶ ಬಾಚವಾರ, ಕೀರ್ತಿಕುಮಾರ, ದೇವು ನಾಯಕ, ಲಕ್ಷ್ಮಣ, ಭೀಮರಾಯ ಮೆಟನಕೇರಿ, ಕಾಶಿನಾಥ ಕಲಾಲ, ಯೇಸುಮಿತ್ರ ಸೇರಿದಂತೆ ಇತರರಿದ್ದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ರಾಮಣ್ಣ ದೊರೆ(ಜಿಲ್ಲಾ ಸಹ ಸಂಚಾಲಕ), ಮಂಜುನಾಥ (ತಾ.ಕಾರ್ಯಾಧ್ಯಕ್ಷರು), ಮಲ್ಲು ನಾಯಕ(ತಾ.ಸಂ.ಕಾರ್ಯದರ್ಶಿ), ಶಿವಕುಮಾರ ಬೆಂಕಿ(ತಾ.ಯು.ಘ.ಕಾರ್ಯಾಧ್ಯಕ್ಷರು), ಮಲ್ಲು ದೊಡ್ಮನಿ(ತಾ.ಯು.ಉಪಾಧ್ಯಕ್ಷರು)

Related Articles

Leave a Reply

Your email address will not be published. Required fields are marked *

Back to top button