ಪ್ರಮುಖ ಸುದ್ದಿ
‘ಕಮಲ’ ಮುಡಿಯುತ್ತಾರಂತೆ ಮಂಡ್ಯ ಸಂಸದೆ ಸುಮಲತಾ?
ಬೆಂಗಳೂರು : ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಭಾರತೀಯ ಜನತಾ ಪಕ್ಷ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಕಮಲ ಪಕ್ಷ ಸೇರಿದತೆ ಅನುಕೂಲವೆಂಬ ಸಲಹೆಗಳು ಕೇಳಿ ಬಂದ ಹಿನ್ನೆಲೆ ಸುಮಲತಾ ಈ ಬಗ್ಗೆ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಈ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಂಡ್ಯ ಜಿಲ್ಲೆಯ ಜನರಿಗೆ ಕೆಆರ್ ಎಸ್ ಚಾನಲ್ ಗಳ ಮೂಲಕ ನೀರು ಬಿಡುವ ಆದೇಶ ಮಾಡಿದ್ದಕ್ಕೆ ಕೇಂದ್ರ ಸಚಿವರಿಗೆ ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಭಿನಂದನೆ ಸಲ್ಲಿಸಿದ್ದರು. ಅಂತೆಯೇ ನೂತನ ಸಿಎಂ ಯಡಿಯೂರಪ್ಪ ಅವರಿಗೂ ಸುಮಲತಾ ಅಭಿನಂದನೆ ಸಲ್ಲಿಸಿದ್ದು ಮಂಡ್ಯ ಸಂಸದೆ ಕಮಲ ಮುಡಿಯುತ್ತಾರೆಂಬ ಮಾತಿಗೆ ಪುಷ್ಠಿ ನೀಡಿದೆ.