ಪ್ರಮುಖ ಸುದ್ದಿ
ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಹೇಳಿಕೆ ಸರಿಯಲ್ಲ-ಪೇಜಾವರ ಶ್ರೀ
ಬಾಗಲಕೋಟೆಃ ಗಾಂಧೀ ಹತ್ಯೆಯಲ್ಲಿ ಸಾವರ್ಕರ ಕೈವಾಡ ಹೇಳಿಕೆ ಸರಿಯಲ್ಲ ಎಂದು ಪೇಜಾವರ ಶ್ರೀಗಳು ಸಿದ್ರಾಮಯ್ಯ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಗಳು, ಸಾವರ್ಕರ್ ಅವರು ಗಾಂಧೀ ಹತ್ಯೆಯಲ್ಲಿ ಕೈವಾಡವಿದ್ದಲ್ಲಿ ಅಂದೇ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಲಿಲ್ಲ ಯಾಕೆ.?
ಅವರು ಆ ಆರೋಪದಿಂದ ಹೊರ ಬಂದಿದ್ದಾರೆ. ನಿದೋಷಿ ಎಂದು ಕೋರ್ಟ್ ಹೇಳಿದೆ. ಕಾನೂನಿನ ಜ್ಞಾನವಿದ್ದವರು ಈ ರೀತಿ ಹೇಳಿಕೆ ನೀಡುವದು ಸರಿಯಲ್ಲ. ರಾಜಕೀಯಕ್ಕಾಗಿ ಇಂತಹ ಬಾಲಿಷ ಹೇಳಿಕೆ ನೀಡುವ ಮೂಲಕ ಮಹಾನ್ ವ್ಯಕ್ತಿ, ಸ್ವಾತಂತ್ರ್ಯ ವೀರರ ವ್ಯಕ್ತಿತ್ವಕ್ಕೆ ಧಕ್ಕೆ ತರುವದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.