ದೇವೇಗೌಡರ ಭೇಟಿ ವೇಳೆ ‘ಕೈ’ ಮಿಲಾಯಿಸಿದ ಕಾರ್ಯಕರ್ತರು!
ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಇಂದು ಬೇಲೂರು ತಾಲೂಕಿನ ರಣಘಟ್ಟ ಚೆಕ್ ಡ್ಯಾಮ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ವಿರೋಧಿಸಿ ಕೆಲವು ರೈತರು 2 ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದರು. ಹೀಗಾಗಿ, ಹಾಸನದ ಸಂಸದರೂ ಆಗಿರುವ ದೇವೇಗೌಡರು ಇಂದು ಸ್ಥಳಕ್ಕೆ ಭೇಟಿ ನೀಡಿದ್ದರು.
ಆದರೆ, ದೇವೇಗೌಡರು ಭೇಟಿ ನೀಡಿದ ವೇಳೆ ಕೆಲ ರೈತ ಮುಖಂಡರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಪರಿಣಾಮ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಮತ್ತು ರೈತ ಮುಖಂಡರ ಮದ್ಯೆ ವಾಗ್ವಾದ ಆರಂಭವಾಗಿದೆ. ನಿಮ್ಮ ಪಕ್ಷದ ಅಧಿಕಾರವಿದ್ದಾಗ ನೀವೇನು ಮಾಡಿದ್ದೀರಿ ಎಂದು ರೈತರು ಪ್ರಶ್ನಿಸಿದ್ದಾರೆ. ನೀವೆಲ್ಲಾ ನಕಲಿ ರೈತ ಮುಖಂಡರು. ನಿಜವಾದ ರೈತರು ಬೇರೆ ಇದ್ದಾರೆಂದು ಜೆಡಿಎಸ್ ಮುಖಂಡರು ಪ್ರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಮ ಎರಡೂ ಗುಂಪುಗಳ ಮದ್ಯೆ ನೂಕಾಟ ತಳ್ಳಾಟ ನಡೆದಿದ್ದು ಕೈಕೈ ಮಿಲಾಯಿಸುವ ಹಂತ ತಲುಪದೆ. ಕೊನೆಗೆ ಪೊಲೀಸರ ಮದ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ ಎಂದು ತಿಳಿದುಬಂದಿದೆ.