ಧರ್ಮ ಸಂಸದ್ : ಮೋಹನ್ ಭಾಗವತ್, ತೊಗಡಿಯಾ, ಪೇಜಾವರಶ್ರೀ ಹೇಳಿದ್ದೊಂದೇ ಮಾತು!
ಮಂದಿರ ಹೊರತು ಮತ್ತೇನಿಲ್ಲ – ಭಾಗವತ್
ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ ಹೊರತು ಬೇರೇನೂ ಅಲ್ಲ ಎಂದು ಆರ್ ಎಸ್ ಎಸ್ ನ ಮೋಹನ್ ಭಾಗವತ್ ಹೇಳಿದರು. ರಾಮಮಂದಿರ ನಿರ್ಮಾಣ ಕಾಲ ಸನ್ನಿಹಿತವಾಗಿದೆ. ಅದೇ ರಾಮನ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗಲಿದೆ. ಮತ್ತು ಮೂಲ ಮಾದರಿಯಲ್ಲೇ ನಿರ್ಮಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನದಲ್ಲಿ ರಾಮರಾಜ್ಯ – ತೊಗಡಿಯಾ
ಇನ್ನು ವಿಶ್ವ ಹಿಂದೂ ಪರಿಷತ್ ನ ಪ್ರವೀಣ್ ಭಾಯಿ ತೊಗಾಡಿಯಾ ಮಾತನಾಡಿ ಮಠ, ಮಂದಿರಗಳು ಸರ್ಕಾರಿಸ್ವಾಮ್ಯತೆಯಿಂದ ಮುಕ್ತವಾಗಬೇಕು ಎಂದು ಅಭಿಪ್ರಾಯಪಟ್ಟರು. ಹಿಂದೂ ದೇವಾಲಯಗಳು ಸರ್ಕಾರಿ ಹಿಡಿತದಿಂದ ಮುಕ್ತವಾಗಿ ಬೆಳೆಯಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ಆ ಮೂಲಕ ಹಿಂದೂಸ್ತಾನದಲ್ಲಿ ರಾಮರಾಜ್ಯ ನಿರ್ಮಣವಾಗಬೇಕು ಎಂದರು.
2019ರೊಳಗೆ ಮಂದಿರ ನಿರ್ಮಾಣ – ಪೇಜಾವರಶ್ರೀ
ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ದೇಶದಲ್ಲಿ ಇನ್ನೂ ಭೌತಿಕ ಮತ್ತು ಆಧ್ಯಾತ್ಮಿಕತೆಯ ಸಮೃದ್ಧಿ ಆಗಬೇಕಿದೆ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಶ್ರೇಷ್ಠತೆ ಇದೆ. ಲಿಂಗಾಯತರು, ವೀರಶೈವರೂ ಶಿವನನ್ನು ಆರಾಧಿಸುತ್ತಾರೆ ಅವರು ಹಿಂದೂಗಳು ಎಂದು ಅಭಿಪ್ರಾಯ ಪಟ್ಟರು. 2019ರೊಳಗೆ ರಾಮಮಂದಿರ ನಿರ್ಮಾಣ ಆಗಲಿ ಎಂದು ಆಶಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಕೃಷ್ಣನ ಅನುಗ್ರವಿಗೆ ಮಂದಿರ ನಿರ್ಮಾಣ ಆಗೋದರಲ್ಲಿ ಅನುಮಾನವಿಲ್ಲ ಎಂದರು.