ಕಾವ್ಯ
ಬಸವರಾಜ ಕಾಸೆ ಅವರ ಖಾಸ್ ಗಜಲ್ ..
ಭೂ-ಆಗಸಕ್ಕೂ ಮಿಗಿಲಾದ ಬಾಂಧವ್ಯದಾವದು.?
ಮುಂದಾಡುವ ಚೆಂದದ ಮಾತುಗಳು ಸುಳ್ಳುಗಳ ಬಿಂದಿಗೆ ಗೊತ್ತಿರಲಿಲ್ಲ.
ಜೊತೆಗೆ ಚೆನ್ನಾಗಿದ್ದು ಹಿಂದೆ ಚೂರಿ ಹಾಕುವ ಸ್ವಭಾವದ ಬಗೆ ಗೊತ್ತಿರಲಿಲ್ಲ.
ಸಂಗೀತ ಸ್ವರಗಳ ಆಲಿಸಿ ಮೈಮರೆತು ಕಲ್ಪನೆಯಲ್ಲಿ ತೇಲಿದೆ ಹಾಯಾಗಿ.
ಅಂತೆ ಕಂತೆಗಳ ಕುತೂಹಲದ ರುಚಿಯೇ ಸ್ವಾದದ ಹೋಳಿಗೆ ಗೊತ್ತಿರಲಿಲ್ಲ.
ಭೂ ಆಗಸಕ್ಕೂ ಮಿಗಿಲು ಒಡನಾಟಗಳ ಆಳ ಬಾಂಧವ್ಯದ ಮಹತ್ವ.
ನಂಬಿಸಿ ವಂಚಿಸುವ ಸ್ವಾರ್ಥಗಳ ಹುಚ್ಚಾಟ ಇರುವುದರ ಹೊರ ಒಳಗೆ ಗೊತ್ತಿರಲಿಲ್ಲ.
ಗುರಿಗಳು ಕನಸಾಗಿ ಹರಡಿವೆ ಕಣ್ಣ ಹಿಮಾಲಯದ ತುಂಬಾ
ಹತ್ತುವ ಮೊದಲು ಮಂಜುಗಡ್ಡೆಯಂತೆ ಜಾರಿಸುತ್ತಾರೆಂದು ಹೀಗೆ ಗೊತ್ತಿರಲಿಲ್ಲ.
ಏನಾದರೂ ಸಾಧಿಸಬೇಕು ಎಂಬ ಅಮಾಯಕ ಭಾವಗಳ ತಳಮಳದ ಮನ.
ಬದುಕಲು ಬಿಡದ ಕೆಟ್ಟ ಜಗದ ಜುಟ್ಟುಗಳ ಗುಟ್ಟು ಬಸುಗೆ ಗೊತ್ತಿರಲಿಲ್ಲ.
–ಬಸವರಾಜ ಕಾಸೆ.