ಪ್ರಮುಖ ಸುದ್ದಿ

ಬಸವಕಲ್ಯಾಣಃ 20,449 ಮತಗಳ ಅಂತರದಿಂದ‌ ಸಲಗಾರ ಗೆಲುವು

ಬಸವಕಲ್ಯಾಣಃ 20,449 ಮತಗಳ ಅಂತರದಿಂದ‌ ಸಲಗಾರ ಗೆಲುವು

ಬೀದರಃ ಜಿಲ್ಲೆಯ ಬಸವಕಲ್ಯಾಣ ‌ವಿಧಾನಸಭೆ ಕ್ಷೇತ್ರದ‌‌ ಹಾಲಿ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ‌ ಚುನಾವಣೆಯಲ್ಲಿ‌ ಬಿಜೆಪಿಯ ಶರಣು ಸಲಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.

20,449 ಮತಗಳ‌ ಅಂತರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಅನುಕಂಪದ ಅಲೆ‌ ಬಾವಕಲ್ಯಾಣದಲ್ಲಿ ಕೆಲಸ‌ ಮಾಡಲಿಲ್ಲ. ಅಲ್ಲದೆ‌ ಜೆಡಿಎಸ್ ಅಭ್ಯರ್ಥಿ‌ ಮತಗಳನ್ನು ಸೆಳೆದಿರುವದು‌ ಬಿಜೆಪಿಗೆ ಲಾಭವಾಗಿದೆ ಎನ್ನಲಾಗಿದೆ.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ‌ ಬಿಜೆಪಿ ಟಿಕೆಟ್ ದೊರೆಯದ ಕಾರ‌ಣ ಸ್ವತಂತ್ರ ರಾಗಿ‌ ಸ್ಪರ್ಧಿಸಿ ನಾಲ್ಕನೇ ಸ್ಥಾನಕ್ಕೆ‌ ತೃಪ್ತಿಪಟ್ಟುಕೊಳ್ಳುವ ಮೂಲಕ‌ ಕ್ಷೇತ್ರದ ಮತದಾರರು‌ ಖೂಬಾ ಅವರನ್ನು ಸಂಪೂರ್ಣ ‌ಕೈಬಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button