ಪ್ರಮುಖ ಸುದ್ದಿ

ಪುರಾತನ ದಿಗ್ಗಿ ಅಗಸಿಗೆ ಧಕ್ಕೆಃ ಸ್ಥಳೀಯರ ವಿರೋಧ ಕಾಮಗಾರಿ ಸ್ಥಗಿತ

ಪುರಾತನ ದಿಗ್ಗಿ ಅಗಸಿಗೆ ಧಕ್ಕೆಃ ಸ್ಥಳೀಯರ ವಿರೋಧ ಕಾಮಗಾರಿ ಸ್ಥಗಿತ

ಯಾದಗಿರಿಃ ಜಿಲ್ಲೆಯ ಶಹಾಪುರದಲ್ಲಿ ದಿಗ್ಗಿ ಬೇಸ್ ರಸ್ತೆ ಮೂಲಕ ಕುಡಿಯುವ ನೀರು ಪೂರೈಕೆಗಾಗಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ಈ ವೇಳೆ ಪುರಾತನ ಐತಿಹಾಸಿಕ ದಿಗ್ಗಿ ಬೇಸ್ ಗೆ ಸ್ಮಾರಕಕ್ಕೆ ಧಕ್ಕೆ ತಂದೊಡ್ಡಲಾಗಿದೆ. ಸ್ಥಳೀಯರು ಈ ಕುರಿತು ಜಾಗೃತಗೊಂಡಿದ್ದು, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಗ್ಗಿ ಅಗಸಿ ಐತಿಹಾಸಿಕವಾಗಿ ಸಾಕಷ್ಟು ಪ್ರಚುರದಲ್ಲಿದ್ದು, ಸುಭದ್ರತೆಯಿಂದ ಕೂಡಿದೆ. ಕಾಮಗಾರಿ ಹಿನ್ನೆಲೆ‌ ಗುತ್ತಿಗೆದಾರರು,‌ ಅಗಸಿ‌ ಒಳಗಡೆ ತಗ್ಗು ತೋಡಿಸಲು ಹೋಗಿ ಇದೀಗ ಇಡಿ ಅಗಸಿಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.

ಸುಭದ್ರತೆ ಹೊಂದಿದೆ ಇತಿಹಾಸ ಪ್ರಸಿದ್ಧ ಹೊಂದಿದ ಅಗಸಿ ತಗ್ಗು ತೋಡಿರುವ ಹಿನ್ನೆಲೆ‌ ಬಿರುಕ‌ ಬಿಟ್ಟಿದ್ದು, ಬೀಳುವ ಧಾವಂತಕ್ಕೆ ತಂದೊಡ್ಡಿದ್ದಾರೆ.

ದಿಗ್ಗಿ ಅಗಸಿ ಔರಂಗಜೇಬ ಹಾಗೂ ಆತನ ಬಲಗೈಯ ಬಂಟ ಧಿಲೇರಖಾನ ಶಹಾಪುರ ಕೋಟೆ‌ ಮೇಲೆ ದಾಳಿ ಮಾಡಿದಾಗ ಇದೇ ಅಗಸಿ ಬಾಗಿಲು‌ ಮುರಿಯಲು ಹರಸಾಹಸ ಪಟ್ಟು ಸೋತು ಸುಣ್ಣವಾಗಿ ಓಡಿ ಹೋಗಿರುವ ಇತಿಹಾಸವಿದೆ.

ಇಂತಹ ಐತಿಹಾಸಿಕ ತಾಣಕ್ಕೆ ಧಕ್ಕೆ ತಂದೊಡ್ಡಿದ್ದು ಮಹಾ ಅಪರಾಧವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡರಾದ ಬಸವರಾಜ ತಳವಾರ, ಶಿವಪುತ್ರ ಜವಳಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button