ಕಥೆ

ಕರ್ತವ್ಯ ಪ್ರಜ್ಞೆ ಮೆರೆದ ಡಾಕ್ಟರ್ ಈ ಕಥೆ ಓದಿ

ಕರ್ತವ್ಯಪ್ರಜ್ಞೆ

ತಡವಾಗಿ ಬಂದು ಆಪರೇಷನ್ ಥಿಯೇಟರ್‌ಗೆ ಓಡುತ್ತಿರುವ ಡಾಕ್ಟರ್‌ನನ್ನು ನೋಡಿದ ಆ ತಂದೆಗೆ ಸಿಟ್ಟು ಬಂತು. ಆಗಲೇ ಫೋನ್ ಮಾಡಿದರೆ ಇಷ್ಟು ತಡವಾಗಿ ಬಂದಿದ್ದೀರಲ್ಲ ? ನನ್ನ ಮಗನ ಜೀವ ಹೋಗುವುದರಲ್ಲಿದೆ ಅಂತ ನಿಮಗೆ ಗೊತ್ತಿಲ್ಲಾ? ಎಂದು ಬಯ್ಯತೊಡಗಿದ.

ಸಾರಿ ಸರ್, ಯಾರ ಜೀವವೂ ನನ್ನ ಕೈಲಿಲ್ಲ. ನನ್ನ ಪ್ರಯತ್ನ ಮಾಡುವೆ. ನೀವು ದೇವರಲ್ಲಿ ಪ್ರಾರ್ಥಿಸುತ್ತಾ ಕುಳಿತಿರಿ ಎಂದರು ಡಾಕ್ಟರ್, ಮಗನ ಪ್ರಾಣ ಹೋಗುತ್ತಿರುವ ಸಂದರ್ಭದಲ್ಲಿ ಸಾವಕಾಶದಲ್ಲಿ ಕೂರಲು ಹೇಗಾಗುತ್ತೆ? ನಿಮ್ಮ ಮಗನೇ ಒಳಗಿದ್ದರೆ ಹೀಗೆ ಮಾತನಾಡುತ್ತಿದ್ರಾ ? ಎಂದು ಆತ ಹಿಗ್ಗಾಮುಗ್ಗಾ ಬಯ್ಯತೊಡಗಿದ.

ಮಾತನಾಡದೆ ಆಪರೇಷನ್ ಥಿಯೇಟರ್‌ಗೆ ಹೋದ ಡಾಕ್ಟರ್ ಎರಡು ಗಂಟೆ ನಂತರ ಹೊರಬಂದು, ನಿಮ್ಮ ಮಗ ಬದುಕಿಕೊಂಡ. ಉಳಿದೆಲ್ಲವನ್ನೂ ನರ್ಸ್ ಬಳಿ ಕೇಳಿಕೊಳ್ಳಿ. ನನಗೆ ಸ್ವಲ್ಪ ಅರ್ಜೆಂಟ್ ಇದೆ ಎಂದು ಓಡೇ ಬಿಟ್ಟರು.

ಎಂಥ ಅಹಂಕಾರ ನನ್ನ ಮಗನ ಆರೋಗ್ಯ ಸ್ಥಿತಿಯನ್ನು ಹೇಳದೇ ಓಡುತ್ತಿದ್ದಾರಲ್ಲ ಎಂದು ಗೊಣಗಿದ ತಂದೆ. ನಸ್೯ ಹತ್ರ ಕೇಳಿದರು, ಆಗ ನರ್ಸ್ ಹೇಳ್ತಾಳೆ ಡಾ.ಕ್ಟರ್ ಅವರ ಮಗ ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದು ಅವರು ಅಂತ್ಯಸಂಸ್ಕಾರಕ್ಕೆ ಹೋದರು ಎಂದಾಗ ಆತನಿಗೆ ಸಿಡಿಲು ಬಡಿದಂತಾಯಿತು.

ನೀತಿ :– ಡಾಕ್ಟರ್ ತನ್ನ ಮಗನ ಅಂತ್ಯಸಂಸ್ಕಾರ ವಿದ್ದರೂ ತನ್ನ ಕರ್ತವ್ಯ ಪ್ರಜ್ಞೆ ಮೆರೆದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button