
ದಿನಕ್ಕೊಂದು ಕಥೆ
ಹಠ ಮತ್ತು ಮೊಂಡುತನ ಬಿಟ್ಟು ಸಿಕ್ಕ ಅವಕಾಶ ಉಪಯೋಗಿಸಿ.
ಒಂದೂರಲ್ಲಿ ಒಬ್ಬ ಸಾಧು ಅವನು ದೇವರಲ್ಲಿ ತುಂಬಾ ಭಕ್ತಿ ಇಟ್ಟುಕೊಂಡಿದ್ದ ಇಟ್ಟುಕೊಂಡಿದ್ದ ದೇವರ ಧ್ಯಾನ ತಪಸ್ಸು ಮಾಡುತ್ತಾ ಜೀವನ ಕಳಿಯುತ್ತಿದ್ದ ಒಂದಿನ ಮರದ ಕೆಳಗಡೆ ತಪಸ್ಸಿಗೆ ಅಂತ ಕೂತ್ಕೊಂಡಿದ್ದ ಜೋರಾಗಿ ಪ್ರಳಯ ಬರೋಕೆ ಶುರುವಾಯಿತು.
ಜನ ಆ ಕಡೆಯಿಂದ ಈ ಕಡೆಗೆ ಗಾಬರಿಯಿಂದ ಓಡಾಡೋ ಶುರು ಮಾಡ್ತಾರೆ ಅಷ್ಟು ಜನರಲ್ಲಿ ಒಬ್ಬ ಸಾಧು ಅವರನ್ನ ನೋಡಿ ಅವರ ಹತ್ತಿರ ಬಂದು ಸ್ವಾಮಿಗಳೇ ಆ ಕಡೆ ಇಂದ ತುಂಬಾ ಜೋರಾಗಿ ನೀರು ಹರಿದು ಬರುತ್ತಿದೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ನಮ್ಮ ಜೊತೆ ನೀವು ಬನ್ನಿ ನಿಮ್ಮ ಜೀವವನ್ನು ಕಾಪಾಡಿಕೊಳ್ಳಿ ಅಂತ ಹೇಳ್ತಾನೆ.
ಸಾದು ಅದಕ್ಕೆ ಏನು ಹೇಳುತ್ತಾರೆ ಗೊತ್ತಾ? ನನಗೇನೂ ಆಗಲ್ಲ. ಮಗು ನಾನು ದೇವರ ತಪಸ್ಸು ಮಾಡ್ತೀನಿ. ಪ್ರತಿ ದಿನ ನಾನು ದೇವರ ಧ್ಯಾನವನ್ನೂ ಮಾಡ್ತೀನಿ. ನನಗೆ ಏನು ಆಗಲ್ಲ ದೇವರು ನನ್ನ ಕಾಪಾಡ್ತಾರೆ ನನ್ನಲ್ಲಿ ಆ ವಿಶ್ವಾಸವಿದೆ ದೇವರ ಮೇಲೆ ನಮಗೆ ನಂಬಿಕೆ ಇದೆ ಅಂತ ಸಾಧು ಹೇಳುತ್ತಾರೆ. ಆಗ ಆ ಮನುಷ್ಯ ಅಲ್ಲಿಂದ ಓಡಿ ಹೋಗ್ತಾನೆ ನೀರು ಸಾದುಗಳ ಹತ್ತಿರ ಬರುತ್ತದೆ. ಆದರೂ ಸಾಧು ಅಲ್ಲಡದೆ ಅಲ್ಲಿ ಕೂತಿರುತ್ತಾರೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ.
ಆದರೂ ಸ್ವಾಮೀಜಿ ಅಲ್ಲಡದೆ ಅಲ್ಲಿ ಕೂತಿರುತ್ತಾರೆ. ಅಲ್ಲಿ ಮತ್ತೊಬ್ಬ ವ್ಯಕ್ತಿ ಬರುತ್ತಾನೆ. ಸ್ವಾಮೀಜಿ ನಾವೆಲ್ಲ ದೋಣಿಯಲ್ಲಿ ಮುಂದೆ ಹೋಗ್ತಾ ಇದ್ದೀವಿ. ನೀವು ನಮ್ಮ ಜೊತೆ ನಮ್ಮ ದೋಣಿಯಲ್ಲಿ ಇನ್ನು ಜಾಗ ಇದೆ. ದಯವಿಟ್ಟು ನನ್ನ ಜೊತೆ ಬನ್ನಿ ಅಂತ ಜನ ಕೇಳುತ್ತಾರೆ. ಆಗ ಸಾಧಿಸಿದ್ದಾರೆ. ಇಲ್ಲಾ ನೀವು ಹೋಗಿ ನನಗೆ ದೇವರು ಕಾಪಾಡ್ತಾನೆ.
ದೋಣಿ ಮತ್ತು ಅಲ್ಲಿದ್ದವರು ಹೋಗುತ್ತಾರೆ. ಸಮಯ ಇನ್ನಷ್ಟು ಮೀರಿ ಹೋಗುತ್ತದೆ. ನೀರು ಸಾಧುವಿನ ಹತ್ತಿರ ಬರುತ್ತದೆ. ಅಲ್ಲಿಗೆ ಜನರನ್ನ ಕಾಪಾಡೋಕ್ಕೆ ಅಂತ ಒಂದು ಹೆಲಿಕಾಪ್ಟರ್ ಬರುತ್ತೆ. ಸಾಧು ಹತ್ತಿರ ಬಂದು ಸ್ವಾಮಿ ಸ್ವಾಮಿ ಇದು ಕೊನೆಯ ಹೆಲಿಕಾಪ್ಟರ್ ಈ ಹಗ್ಗವನ್ನ ಹಿಡ್ಕೊಳ್ಳಿ ಅಂತ ಒಂದು ದೊಡ್ಡ ಹಗ್ಗವನ್ನು ಹೆಲಿಕಾಪ್ಟರ್ ಮೇಲಿಂದ ಎಸೆಯಲಾಗತ್ತದೆ. ಹಗ್ಗವನ್ನು ನೋಡಿದ ಸಾಧುಗಳು ಏನು ಹೇಳ್ತಾರೆ ಗೊತ್ತಾ? ಈ ಹಗ್ಗವನ್ನು ಮೇಲಕ್ಕೆ ಎತ್ತಿ ಕೊಳ್ಳಿ ನನ್ನ ಕಾಪಾಡೋಕೆ ದೇವರಿದ್ದಾರೆ.
ನನಗೆ ದೇವರ ಮೇಲೆ ತುಂಬಾ ನಂಬಿಕೆ ಇದೆ. ನನ್ನ ನಂಬಿಕೆ ಎಂದಿಗೂ ಸುಳ್ಳಾಗಲ್ಲ. ದೇವರು ನನ್ನ ಕಾಪಾಡೇ ಕಾಪಾಡ್ತಾರೆ ನೀವು ಇಲ್ಲಿಂದ ಹೊರಟು ಹೋಗಿ ಅಂತ ಸಾಧು ಅವರನ್ನ ಕೂಡ ಕಳಿಸುತ್ತಾರೆ. ನೀರು ತುಂಬಾ ಹೆಚ್ಚಾಗಿ ಸಾಧು ನೀರಲ್ಲಿ ಮುಳುಗಿ ಕೊನೆಗೆ ಸಾವನೊಪ್ಪುತ್ತಾರೆ.
ನಂತರ ಅವರು ದೇವರ ಹತ್ತಿರ ಹೋಗುತ್ತಾರೆ ಅಲ್ಲಿ ಹೋಗಿ ದೇವರನ್ನ ಕೇಳ್ತಾರೆ. ದೇವರೇ ನನ್ನ ಇಡೀ ಜೀವನ ನಿನ್ನಭಕ್ತಿಯಲ್ಲಿ ಕಳೆದೆ ನನ್ನ ಜೀವನಾವೇ ನಿನ್ನ ಸಲುವಾಗಿ ಮುಡುಪಾಗಿಟ್ಟೆ ನಾನು ನನ್ನ ಧ್ಯಾನ, ತಪಸ್ಸು ಅಂತ ನಿನ್ನ ಆರಾಧನೆಯಲ್ಲಿ ತೊಡಗಿಕೊಂಡಿದೆ.
ನಿಮ್ಮ ಮೇಲೆ ಇಷ್ಟೊಂದು ನಂಬಿಕೆ ಇದ್ದ ನನಗೆ ಕೊನೆಗೆ ಸಿಕ್ಕಿದ್ದೇನು? ನನ್ನ ಕಾಪಾಡೋಕೆ ನೀನು ಬರಲೇ ಇಲ್ಲ. ಕೊನೆಗೆ ನನ್ನ ಸಾವು ಕೂಡ ಆಯಿತು. ಯಾಕೆ ಹೀಗೆ ಮಾಡಿದೆ? ಭಗವಂತ ಸಾಧು ಭಗವಂತನಲ್ಲಿ ಕೇಳಿದಾಗ ದೇವರು ಉತ್ತರ ಹೇಗಿತ್ತು “ಅಯ್ಯೋ ಮೂರ್ಖ ಒಂದು ಸಲ ಅಲ್ಲ, ಎರಡು ಸಲ ಅಲ್ಲ ಮೂರು ಸಲ ನಾನು ನಿನ್ನ ಕಾಪಾಡಕ್ಕೆ ಬಂದಿದ್ದೆ ನಿನ್ನ ಸಹಾಯಕ್ಕೆ ಅಂತ ಬಂದಿದ್ದೆ ಮೊದಲನೇ ಸಲ ಮನುಷ್ಯನ ರೂಪದಲ್ಲಿ, ಎರಡನೇ ಸಲ ದೋಣಿ ಮುಖಾಂತರ ಹಾಗೂ ಮೂರನೇ ಸಲ ಹೆಲಿಕಾಪ್ಟರ್ ಮೂಲಕ ನಿನ್ನ ಸಹಾಯಕ್ಕೆ ಅಂತ ಬಂದೆ” ಆದರೆ ನೀನು ಆ ಯಾವುದೇ ಅವಕಾಶವನ್ನು ಉಪಯೋಗ ಮಾಡಿಕೊಳ್ಳಲಿಲ್ಲ. ನನ್ನ ಕಾಪಾಡೋಕೆ ದೇವರು ಬರ್ತಾನೆ. ದೇವರು ಬರ್ತಾನೆ ಅಂತ ಬಂದ ಅವಕಾಶಗಳನ್ನ ಮಿಸ್ ಮಾಡ್ಕೊಂಡೆ ಅಂತ ದೇವರು ಅವರಿಗೆ ಹೇಳಿದಾಗ ಆಗ ಅವನಿಗೆ ಅರ್ಥ ಆಗುತ್ತೆ , ನಮಗೆ ದೇವರು ಅನೇಕ ಸಲ ಅವಕಾಶಗಳನ್ನ ಕೊಡ್ತಾರೆ ಆದ್ರೆ ನಾವು ನಮ್ಮ ಹಠ ಮತ್ತು ಮೊಂಡುತನದಿಂದ ಅದನ್ನು ದೂರ ಮಾಡ್ತಾನೆ. ಇರ್ತೀವಿ ನನಗೆ ಅದು ಬೇಡ ಇದು ಬೇಡ ನನಗೆ ಅದು ಬೇಕು ಇದು ಬೇಕು ನಾನು ಅಂದುಕೊಂಡಿದ್ದೆ ನನಗೆ ಬೇಕು ಅಂತ ಹಠ ಹಿಡಿದು ಬಂದ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ.
ನೀತಿ :– ಅವಕಾಶಗಳು ಕೈತಪ್ಪಿ ಹೋದ ಮೇಲೆ, ತಪ್ಪಿನ ಅರಿವಾಗುತ್ತದೆ. ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ನಾವು ಉಪಯೋಗ ಮಾಡಿಕೊಳ್ಳಬೇಕು, ಮುಂದೆ ಒಂದಿನ ಸಣ್ಣ ಸಣ್ಣ ಅವಕಾಶಗಳು ದೊಡ್ಡ ಸ್ಥಾನಕ್ಕೆ ಕೊಂಡೊಯ್ಯುತ್ತವೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.