ಸಂಸ್ಕೃತಿ

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಸೂಫಿ ಸರಮತ್ ಜಾತ್ರೆ ಸಂಭ್ರಮ

ಸಗರ ಸೂಫಿ ಸರಮತ್ ಮುತ್ಯಾನ ಜಾತ್ರೆ ಸಂಭ್ರಮ

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಆರಾಧ್ಯದೈವ ಸರಮತ್ ಮುತ್ಯಾ ಎಂದೇ ಖ್ಯಾತಿ ಪಡೆದ ಹಜರತ್ ಸೂಫಿ ಸರಮತ್ ಮುತ್ಯಾನ ಜಾತ್ರೆ ಸಂಭ್ರಮದಲ್ಲಿ  ರಾಜ್ಯದ ವಿವಿಧಡೆಯಿಂದ ಮತ್ತು ಹೊರ ರಾಜ್ಯದ ಭಕ್ತರು ಆಗಮಿಸಿ ಊರುಸ್ ನಲ್ಲಿ ಭಾಗವಹಿಸಿ ತಮ್ಮ ಹರಕೆ ತೀರಿಸಿ ದರ್ಶನ ಪಡೆದು ಪುನೀತರಾದರು.

ಸಗರನಾಡು ಭಾಗದಲ್ಲಿ ಸೂಫಿ ಸರಮತ್ ಜಾತ್ರೆ ಪ್ರಸಿದ್ಧವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಿಂದೆ ಹದಿನೈದು ದಿನ ನಡೆಯುವ ಜಾತ್ರೆ ನಿತ್ಯ ಸಾವಿರಾರು ಜನ ಆಗಮಿಸುತ್ತಿದ್ದರು. ಪ್ರಸ್ತುತ ಒಂದು ವಾರಗಳ ಕಾಲ ನಡೆಯುವ ಜಾತ್ರೆಯಲ್ಲಿ ಜನಸ್ತೋಮ ನಿತ್ಯ ಆಗಮಿಸಿ ಸೋಫಿಸಾಬ ಮುತ್ಯಾನ ದರ್ಶನ ಪಡೆಯುತ್ತಿದ್ದಾರೆ.

ಹೊರ ದೇಶದಲ್ಲಿರುವ ಭಕ್ತರು ಸಹ ಈ ಜಾತ್ರೆಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಸರಮತಸಾಬ ಸೂಫಿಗಳ ಬಾವಿಯ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಹೊರದೇಶಕ್ಕೂ ತೆಗೆದುಕೊಂಡು ಹೋಗುತ್ತಾರೆ. ಸೂಫಿಸಾಹೇಬರ ಬಾವಿಯ ನೀರು ಕುಡಿದರೆ ಯಾವುದೇ ರೋಗ ರುಜಿನಗಳು ಬರುವದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.

ಸೂಫೀ ಸರಮತಸಾಬ ದರ್ಗಾಕ್ಕೆ ಸರ್ವ ಧರ್ಮಿಯರು ಆಗಮಿಸುತ್ತಾರೆ. ಹಿಂದೂಗಳು ಸರಮತ ಸಂತರಿಗೆ ಗಲೀಫ್, ಹೂವಿನ ಚಾದಾರ್ ಸೇರಿದಂತೆ ನೈವೇದ್ಯ ಕಾಯಿ ಕರ್ಪೂರ ಅರ್ಪಿಸುವ ವಾಡಿಕೆ ಇದೆ.

ಜಾತ್ರೆ ಮುಗಿದ ನಂತರವ ಪ್ರತಿ ಗುರುವಾರ ಭಕ್ತಾಧಿಗಳು ಈ ದರ್ಗಾಕ್ಕೆ ಆಗಮಿಸಿ ದರ್ಶನ ಪಡೆಯುತ್ತಿರುತ್ತಾರೆ. ಜಾತ್ರೆ ಸಂಭ್ರಮದಲ್ಲಿ ನೂರಾರು ಜನ ದೀಡ ನಮಸ್ಕಾರ ಹಾಕುತ್ತಾರೆ. ಸಗರನಾಡಿನ ಭಾಗದ ಬಹುದೊಡ್ಡ ಗ್ರಾಮೀಣ ಜಾತ್ರೆ ಇದಾಗಿದ್ದು, ವಿವಿಧ ಬಗೆಯ ಸಿಹಿ ತಿನಿಸು, ಬಗೆಬಗೆಯ ಜಿಲೇಬಿ, ಭಜಿ ಚುರುಮುರಿ ಸೇರಿದಂತೆ ಪರಸ್ಪರರು ಮಹಿಳೆಯರಿಗೆ ಹಸಿರು ಬಳೆ ಹಾಕಿಸುವುದು ಸಿಹಿ ತಿನಿಸು ಕೊಡಿಸುವ ಸಂಪ್ರದಾಯವಿದೆ.

ಹೊರ ರಾಜ್ಯಗಳಿಂದಲೂ ಭಕ್ತರು ದರ್ಶನಕ್ಕೆ ಬರುತ್ತಾರೆ, ಜಾತ್ರೆಗೆ ಬೇಕಾದ ವ್ಯವಸ್ಥೆ ಭಕ್ತಾಧಿಗಳು ಮತ್ತು ದರ್ಗಾದ ಪೀಠಾಧಿಪತಿ ಸರಮತ ಸಜ್ಜಾದಶೀನ ಅವರಿಂದಲೇ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಬರುವದಿರಂದ ಕುಡಿಯುವ ನೀರು ಸೇರಿದಂತೆ ವಸತಿ, ರಸ್ತೆ ಸಂಪರ್ಕ ಸಾರಿಗೆ ಅನಾನುಕೂಲ, ಪಾರ್ಕಿಂಗ್ ವ್ಯವಸ್ಥೆ ಅಮಸ್ಯೆಯಾಗಿದೆ. ಸರ್ಕಾರ ಈ ಜಾತ್ರೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಜಾತ್ರೆಗೆ ಬಂದ ಭಕ್ತಾಧಿಗಳು ತಿಳಿಸಿದ್ದಾರೆ.

 

Related Articles

One Comment

Leave a Reply

Your email address will not be published. Required fields are marked *

Back to top button