ಪ್ರಮುಖ ಸುದ್ದಿ
ಸಿದ್ರಾಮಯ್ಯ ಲಾಟರಿ ಸಿಎಂ-ಈಶ್ವರಪ್ಪ
ಉಡುಪಿಃ ಸಿಎಂ ಸಿದ್ರಾಮಯ್ಯ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದರು.
ಅಲ್ಲದೆ ಸಿದ್ರಾಮಯ್ಯ ಲಾಟರಿ ಸಿಎಂ ಎಂದು ಪರೋಕ್ಷವಾಗಿ ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ನ ಹೀನಾಯಸ್ಥಿತಿ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಎಂ ಆದವರು ಎಂಬ ಪರೋಕ್ಷ ಸಂದೇಶ ನೀಡಿದ ಅವರು,
ಸಿದ್ರಾಮಯ್ಯ ದೇವೆಗೌಡರಿಗೆ ಟೋಪಿ ಹಾಕಿದ್ದಾರೆ, ಅದರಂತೆ ಆರ್ ಎಸ್ ಎಸ್ ನಿಷೇಧಿಸುವ ಕನಸು ಬಿಟ್ಟು ಬಿಡಿ, ರಾಜ್ಯದ ಮಠ ಮಂದಿರಗಳನ್ನು ವಶಕ್ಕೆ ಪಡೆಯುವ ಯೋಚನೆಯು ಮಾಡಬೇಡಿ ರಾಜ್ಯದ ಮಠ ಮಂದಿರ ನಿಮ್ಮ ಅಪ್ಪನ ಆಸ್ತೀನಾ.? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಉಡುಪಿಯ ಕೃಷ್ಣಮಠಕ್ಕೆ ಬಾರದ ನೀವು, ನಾಳೆ ರಾಹುಲ್ ಗಾಂಧಿಯವರು ಮಠಕ್ಕೆ ಬಂದ್ರೆ ನೀವು ಬರ್ತೀರಾತಾನೆ, ಚುನಾವಣೆ ನಿಮಿತ್ತ ಮಠ ಮಂದಿರಗಳಿಗೆ ತೆರುಳುತ್ತಿರುವ ನಿಮ್ಮ ಉದ್ದೇಶ ಜನರಿಗೆ ಅರ್ಥವಾಗುತ್ತೆ ಸಿಎಂ ಅವರೇ ಎಂದು ಕಿಡಿಕಾರಿದರು.