ಕಾವ್ಯಪ್ರಮುಖ ಸುದ್ದಿ
ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ
ಹಂಪಿ ಉತ್ಸವಃ ಯುವ ಕವಿಗೋಷ್ಠಿಗೆ ಪತ್ರಕರ್ತ ವಿಜಯಭಾಸ್ಕರರಡ್ಡಿ ಆಯ್ಕೆ

ಹಂಪಿ ಉತ್ಸವ ಯುವ ಕವಿಗೋಷ್ಠಿಗೆ ವಿಜಯಭಾಸ್ಕರರೆಡ್ಡಿ ಆಯ್ಕೆ
ಸೇಡಂಃ ವಿಜಯನಗರ ಜಿಲ್ಲೆಯಲ್ಲಿ ಫೆ.28ರಂದು ನಡೆಯುವ ಪ್ರಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕವಿ, ಪತ್ರಕರ್ತ ಹಾಗೂ ಯಾದಗಿರಿ ಜಿಲ್ಲಾ UV ವರದಿಗಾರರು ಆದ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ.

ಫೆ.28 ರಿಂದ ಮಾ.2 ವರೆಗೆ ನಡೆಯಲಿರುವ ಹಂಪಿ ಉತ್ಸವದಲ್ಲಿ ಮಾರ್ಚ್ 2ರಂದು ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಜರುಗಲಿರುವ ಯುವ ಕವಿ ಗೋಷ್ಠಿಯಲ್ಲಿ ವಿಜಯಭಾಸ್ಕರರೆಡ್ಡಿ ತಮ್ಮ ಕವಿತೆ ವಾಚಿಸಲಿದ್ದಾರೆ. ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಉದ್ಘಾಟಿಸಲಿದ್ದು, ಸಾಹಿತಿ ಎಸ್.ವಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.