ಪ್ರಮುಖ ಸುದ್ದಿ
ಯು.ಟಿ.ಖಾದರ್ ವಿರುದ್ಧ ಠಾಣೆಗೆ ದೂರು
ಗಲಭೆಗೆ ಕಾರಣ ಖಾದರ್ ಠಾಣೆಗೆ ದೂರು
ಮಂಗಳೂರಃ ನಗರದಲ್ಲಿ ಪೌರತ್ವ ತಿದ್ದುಪಡೆ ಕಾಯ್ದೆ ಜಾರಿ ವಿರೋಧಿಸಿ ಕೈಗೊಂಡ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಮಾಜಿ ಸಚಿವ ಯು.ಟಿ. ಖಾದರ್ ನೀಡಿದ ಹೇಳಿಕೆಯೇ ಕಾರಣವೆಂದು ಆರೋಪಿಸಿ ಖಾದರ್ ಅವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಮೋಹನ್ ರಾಜ್ ಎಂಬುವರು ದೂರು ನೀಡಿದ್ದಾರೆ.
ಎನ್.ಆರ್.ಸಿ., ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಮಂಗಳೂರು ಹೊತ್ತಿ ಉರಿಯುತ್ತದೆ ಎಂದು ಯು.ಟಿ. ಖಾದರ್ ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲ್ಲಿನ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಿಂಸಾಚಾರಕ್ಕೆ ಕಾರಣರಾದ ಕಾಂಗ್ರೆಸ್ ನಾಯಕ, ಮುಸ್ಲಿಂ ಸಮುದಾಯದ ಮುಖಂಡನ ವಿರುದ್ಧ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು. ರಾಜ್ಯ ನಷ್ಟವನ್ನೆಲ್ಲ ಅವರೇ ಭರ್ತಿ ಮಾಡಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.