ಪ್ರಮುಖ ಸುದ್ದಿ
ಗೋಕಾಕ ಸಾಹುಕಾರ್ ಗೆ ಬಹುಪರಾಕ್ ಹೇಳಿದ ಜನತೆ.!
ರಮೇಶ ಸಾಹುಕಾರ ಪಾಲಾದ ಕುಂದಾ ಸ್ವೀಟ್
ವಿವಿ ಡೆಸ್ಕ್ಃ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ಅವರಿಗೆ ಜನತೆ ಬಹುಪರಾಕ್ ಹೇಳಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ಸಹೋದರರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟಿತ್ತು. ಇಂದು ಮತ ಎಣಿಕೆ ಫಲಿತಾಂಶ ಹೊರ ಬಿದ್ದಿದ್ದು ಬಹುತೇಕ ಜನತೆ ರಮೇಶ ಜಾರಕಿಹೊಳಿ ಅವರಿಗೆ ಬಹು ಪರಾಕ್ ಹೇಳಿರುವದು ಅವರ ಗೆಲುವಿನಿಂದ ತಿಳಿದು ಬರುತ್ತಿದೆ.
ಗೋಕಾಕ್ ನಲ್ಲಿ ಸಹೋದರರ ನಡುವಿನ ಸ್ಪರ್ಧೆ ರಾಮ್ ಮತ್ತು ಲಖನ್ ನಡುವೆ ಏರ್ಪಟ್ಟಿತ್ತು. ಇದೀಗ ರಾಮ್ ಗೆಲುವಿನ ನಗೆ ಬೀರಿದ್ದಾರೆ. ಲಖನ್ ಗೆಲುವು ಸಾಧಿಸಲಾಗದೆ ಜಾರಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ, ಸಹೋದರ ಲಖನ್ ಗೆಲುವಿಗೆ ಶ್ರಮವಹಿಸಿದ್ದರು, ರಮೇಶ ಕುರಿತು ಅವನೊಬ್ಬ ಮೆಂಟಲ್ ಎಂದು ಸಹ ಜರಿದಿದ್ದರು.
ಒಟ್ಟಾರೆ ಗೋಕಾಕ್ ಸಾಹುಕಾರ್ ರಮೇಶಗೆ ಕುಂದಾನಗರಿ ಜನ ಕುಂದಾ ಸ್ವೀಟ್ ತಿನ್ನಿಸಿದ್ದಾರೆ ಎನ್ನಬಹುದು.




