ಕೋವಿಡ್-19-ಹಸಿರು ಕಲ್ಲಂಗಡಿ-ರೆಡ್-ಕಪ್ಪು ಬೀಜ(ಜಿಲ್ಲಾಡಳಿತದ ಕಾರ್ಯವೈಖರಿ)
ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಯಾದಗಿರಿಗೆ ದ್ವಿತೀಯ ಸ್ಥಾನ
ಯಾದಗಿರಿಃ ಶುದ್ಧ ಕಲ್ಲಂಗಡಿ ಹಣ್ಣಿನಂತಿದೆ ಎಚ್ಚರದಿಂದರಬೇಕು. ಕಲ್ಲಂಗಡಿ ಮೇಲ್ನೋಟದಲ್ಲಿ ಗ್ರೀನ್ ಜೋನ್ ಹಚ್ಚ ಹಸಿರಾಗಿದೆ. ಆದರೆ ಅದರೊಳಗಡೆ ಪೂರ್ಣ ಕೆಂಪು ಆವೃತ ಅಂದರೆ ರೆಡ್ ಇದೆ ಎಂದು ಸಾಕಷ್ಟು ಬಾರಿ ಮಾಧ್ಯಮಗಳು ಎಚ್ಚರಿಸಿದವು.
ಆದರೆ ಯಾದಗಿರಿ ಜಿಲ್ಲಾಡಳಿತ ಮಾತ್ರ ಸಮರ್ಪಕ ಕ್ರಮ ತೆಗೆದುಕೊಳ್ಳಿವಲ್ಲಿ ಎಡವಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.
ಇಂದು ಭಾನುವಾರ ಮತ್ತೆ 44 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 241 ರಿಂದ 285 ಕ್ಕೆ ಏರಿಕೆಯಾಗಿದೆ.
ಕಲ್ಲಂಗಡೆಯೊಳಗಡೆ ಬರಿ ಕೆಂಪು ಮಾತ್ರ ಇದೆ ಎಂದು ಎಚ್ಚರಿಸಲಾಗಿತ್ತು ಇದೀಗ ತಿಳಿದು ಬರುತ್ತಿದೆ. ಕಲ್ಲಂಗಡಿಯೊಳಗಡೆ ಕೆಂಪು ಮಧ್ಯ ಕಪ್ಪು ಬೀಜಗಳು ಇವೆ ಎಂದು. ಈ ವಿಷಯ ಯಾಕೆ ಪ್ರಸ್ತಾಪ ಎಂದರೆ, ಗುರಮಿಠಕಲ್ ಸೇರಿದಂತೆ ಶಹಾಪುರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಹಲವರಿಗೆ ಪರೀಕ್ಷಾ ವರದಿ ಬರುವ ಮುಂಚೆಯೇ ಅವರನ್ನು ಮನೆಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಡಳಿತ ಕಾರ್ಯ ವೈಖರಿ ನೋಡಿದರೆ ನಿಗೂಢವಾಗಿ ಕಪ್ಪು ಬಣ್ಣಕ್ಕೆ ಏನೇ ಅಂಟಿದರೂ ಕಾಣದಂತೆ ನಿಗೂಢವಾಗಿರುವಂತೆ ಜಿಲ್ಲಾಡಳಿತ ಕಾರ್ಯ ವೈಖರಿ ನಡೆಯುತ್ತಿದೆ ಎನ್ನಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದವರ ಪರೀಕ್ಷಾ ವರದಿ ಬರುವ ಮುಂಚೆ ಕಳುಹಿಸಿ ಕೊಟ್ಟಿರುವದು. ಮೈಗೆ ಟೈಂಬಾಂಬ್ ಫಿಕ್ಸ್ ಮಾಡಿ ಕಳುಹಿಸದಂಗಾಗಿದೆ.
ಅಧಿಕಾರಿಗಳ ಸ್ವ ಇಚ್ಛೆ ಎನ್ನಬೇಕೋ ಅಥವಾ ಅಂಧಕಾರ್ಯ ಎನ್ನಬೇಕೋ ಗೊತ್ತಾಗುತ್ತಿಲ್ಲ. ಇದಕ್ಕೆ ಕಪ್ಪು ಬೀಜಗಳಿವೆ. ಯಾರಿಗೂ ಗೊತ್ತಾಗದಂತೆ ಎಡವಟ್ಟು ಕೆಲಸ ಮಾಡುವದಕ್ಕೆ ಕಪ್ಪು ಕಾರ್ಯ ಎನ್ನುವ ಉದ್ದೇಶಕ್ಕೆ ಕಲ್ಲಂಗಡಿ ಕಪ್ಪು ಬೀಜಗಳ ಉದಾಹರಣೆ ನೀಡಬೇಕಾಯಿತು ಅಷ್ಟೆ.
ನಮ್ಮ ಜಿಲ್ಲಾಡಳಿತದ ಅಂಧಾಕಾರ ಕಾರ್ಯದಿಂದ ಮನೆಗೆ ಕಳುಹಿಸಿದ ಕ್ವಾರಂಟೈನ್ನರ ಪರೀಕ್ಷಾ ವರದಿ ನೆಗೆಟಿವ್ ಇದ್ದಲ್ಲಿ ಸದ್ಯ ಉಸಿರಾಡಬಹುದು. ಪಾಸಿಟಿವ್ ಬಂದಲ್ಲಿ ಜಿಲ್ಲೆಯ ಸ್ಥಿತಿ ಸಂಪೂರ್ಣ ಬಿಗಡಾಯಿಸುವ ಮೂಲಕ ಮಹಾರಾಷ್ಟ್ರದ ಸ್ಥಿತಿಗೆ ಕೊಂಡೊಯ್ಯುವದರಲ್ಲಿ ಅನುಮಾನವಿಲ್ಲ ಎಂಬ ಚಿಂತನಾ, ಕೊರೊನಾ ವಿರುದ್ಧ ಹೋರಾಟದಲ್ಲಿ ಸೇವಾ ಮನೋಭಾವದಿಂದ ಭಾಗವಹಿಸಿದ ಸಂಘ ಸಂಸ್ಥೆಯ ಮುಖಂಡರಾದ ಗುರು ಕಾಮಾ, ರಾಜಶೇಖರ ಚಿಲ್ಲಾಳ ಆತಂಕ ವ್ಯಕ್ತಪಡಿಸಿದ್ದಾರೆ.