ಪ್ರಮುಖ ಸುದ್ದಿ
ಇನ್ನೆರಡು ದಿನದಲ್ಲಿ ಲಾಕ್ ಡೌನ್ ಜಾರಿಗೆ ನಿರ್ಧಾರ, ಸಹಕಾರ ಅಗತ್ಯ- CM ಉದ್ಧವ್ ಠಾಕ್ರೆ
ಇನ್ನೆರಡು ದಿನದಲ್ಲಿ ಲಾಕ್ ಡೌನ್ ಜಾರಿಗೆ ನಿರ್ಧಾರ, ಸಹಕಾರ ಅಗತ್ಯ- CM ಉದ್ಧವ್ ಠಾಕ್ರೆ
ಮುಂಬೈಃ ಮಹಾರಾಷ್ಟ್ರ ರಾಜ್ಯದಾದ್ಯಂತ ಕೊರೊನಾ ಸೋಂಕು ತೀವ್ರತೆ ಪಡೆದುಕೊಳ್ಳುತ್ತಿದ್ದು, ದಿನಕ್ಕೆ 50 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಆ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನದಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ನಿರ್ಧಾರಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಜನರ ಹಿತ ದೃಷ್ಟಿಯಿಂದ ಮಾಯಾವಿ ರಾಕ್ಷಸ ಕೋವಿಡ್ ನಿಂದ ರಕ್ಷಣೆ ಪಡೆತಲು ಲಾಕ್ ಡೌನ್ ಮಾಡುವದು ಅಗತ್ಯವಿದೆ. ಜನರ ಸ್ಪಂಧನೆ ಅಗತ್ಯವಿದೆ ಎಂದು ಅವರು ಕೋರಿದ್ದಾರೆ.
ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆಯನ್ನು ನಾನು ತಳ್ಳಿ ಹಾಕುವದಿಲ್ಲ. ಜನರ ರಕ್ಷಣೆ ಬಹುಮುಖ್ಯವಿದೆ. ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವೆ ಎಂದಿದ್ದಾರೆ.