ಬಸವಭಕ್ತಿ

‘ಮಜಾ ಟಾಕೀಸ್​’ನಲ್ಲೊಂದು ಅಚ್ಚರಿ ಸಿರೀಸ್-2 : ಶಿವ, ರಾಮ, ಕೃಷ್ಣ ಭೂಮಿ ಮೇಲೆ ನಡೆದಾಡಿದವರೇ…!

ಮಜಾ ಟಾಕೀಸ್ ನಲ್ಲಿ ಸದ್ಗುರು ಜಗದೀಶ ವಾಸುದೇವ ಗುರೂಜಿ ಹೇಳಿದ್ದು…

ನಾನೊಂದು ಜೋಕ್ ಹೇಳಲೇ? ನೀವು ಇದಕ್ಕೆ ಮಜಾ ಅಥವಾ ಇನ್ನೇನು ಹೇಳುತ್ತೀರೋ..

ಇದು ನ್ಯೂಯಾರ್ಕ್ ನಗರದಲ್ಲಿ ನಡೆದ ಒಂದು ಪ್ರಸಂಗ. ಒಂದು ಎಂಟು ವರ್ಷದ ಹುಡುಗ ಮಧ್ಯಾಹ್ನ ಮನೆಗೆ ಬಂದ. ಅವನ ತಾಯಿ ಪ್ರಗತಿಪರ ಮಹಿಳೆ ಆಗಿದ್ದಳು. ನಿಸ್ಸಂಶಯವಾಗಿ ಅವಳು ಒಂಟಿಯಾಗಿದ್ದಳು. ಮನೆಗೆ ಬಂದು ಆ ಹುಡುಗ ಅಮ್ಮನನ್ನು ಕೇಳಿದ. ಅಮ್ಮ, ದೇವರು ಹೆಣ್ಣೋ ಗಂಡೋ? ಪ್ರಗತಿಪರ ಮಹಿಳೆ ಆಗಿದ್ದ ಅವಳು, ಇದರ ಬಗ್ಗೆ ಹಲವು ರೀತಿಯಲ್ಲಿ ಯೋಚಿಸಿದಳು. ತನ್ನ ದೇಶದಲ್ಲಿರುವ ಲಿಂಗ ಸೂಕ್ಷ್ಮತೆಗಳನ್ನು ಮತ್ತು ಹಿಂದಿನ ಚುನಾವಣೆಯಲ್ಲಿ ಈ ವಿಷಯವನ್ನು ನಿಶ್ಚಯಿಸಲಾಗದೆ ಇದ್ದುದನ್ನು ಯೋಚಿಸಿದಳು. ಬಹಳ ಯೋಚಿಸಿದ ಬಳಿಕ ಅವಳು ದೇವರು ಇಬ್ಬರೂ ಹೌದು ಎಂದು ಹೇಳಿದಳು.

ಹುಡುಗ ಇದನ್ನು ಕೇಳಿ ತುಂಬಾ ಯೋಚಿಸಿ, ಮತ್ತೆ ಬಂದು ದೇವರು ಬಿಳಿಯನೋ ಕರಿಯನೋ ಎಂದು ಕೇಳಿದನು. ತನ್ನ ದೇಶದಲ್ಲಿ ನಡೆಯುತ್ತಿರುವ ವರ್ಣ ದ್ವೇಷದ ಬಗ್ಗೆ ಯೋಚಿಸಿ, ದೇವರು ಇಬ್ಬರು ಹೌದು ಎಂದು ಹೇಳಿದಳು. ಬಾಲಕ ದೀರ್ಘವಾಗಿ ಆಲೋಚಿಸಿ, ದೇವರು ಸಲಿಂಗಕಾಮಿಯೋ ಅಥವಾ ಸಲಿಂಗಕಾಮಿ ಅಲ್ಲವೋ ಎಂದು ಕೇಳಿದನು. ದೇಶದಲ್ಲಿ ನಡೆಯುತ್ತಿರುವ ಲಿಂಗ ಸುಕ್ಷ್ಮತೆಗಳನ್ನು ನೆನೆಯುತ್ತಾ, ಅವಳು ದೇವರು ಇಬ್ಬರೂ ಹೌದು ಎಂದಳು. ಆಗ ಬಾಲಕನು ಆನಂದದಿಂದ ಕುಪ್ಪಳಿಸುತ್ತಾ ದೇವರು ಮೈಕಲ್ ಜಾಕ್ಸನ್ ಎಂದು ನನಗೆ ಗೊತ್ತಾಯಿತು ಎಂದು ಕೂಗಿದನು.

ನಿಮಗೆ ನಾನು ಒಂದು ಜೋಕ್ ಹೇಳಲೇ? ನೀವು ಇದಕ್ಕೆ ಮಜಾ ಅಥವಾ ಇನ್ನೇನು ಹೇಳುತ್ತೀರೋ? ನೀವು ಹೇಗೆ ನಿಮ್ಮ ನಂಬಿಕೆಗಳಿಗೆ ಬಂದು ಮುಟ್ಟಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆದರೆ, ಪ್ರತಿಯೊಂದು ಸಂಸ್ಕೃತಿಯೂ ಅದರ ಸ್ವಂತ ನಂಬಿಕೆಗಳಿಗೆ ಬಂದು ಮುಟ್ಟಿದೆ. ಆದರೆ, ವಿಷಯ ಏನೆಂದರೆ ಅಸ್ತಿತ್ವದ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಇಷ್ಟೆಲ್ಲ ವಿಗ್ನಾನದ ನಂತರವೂ ಒಂದು ಅಣುವನ್ನು ಪೂರ್ತಿಯಾಗಿ ಇನ್ನೂ ತಿಳಿದಿಲ್ಲ. ಅದನ್ನು ಹೇಗೆ ಉಪಯೋಗಿಸಬೇಕು. ಹೇಗೆ ಒಡೆಯಬೇಕು, ಅದರಿಂದ ಬಾಂಬ್ ಹೇಗೆ ತಯಾರಿಸಬೇಕೆಂದು ಗೊತ್ತು: ಆದರೆ ಅಣುವನ್ನು ಇನ್ನೂ ಸಂಪೂರ್ಣವಾಗಿ ತಿಳಿಯಲು ಆಗಿಲ್ಲ.

ಆದರೆ, ಸೃಷ್ಟಿಕರ್ತನನ್ನು ನಾವು ಅರಿತಿದ್ದೇವೆ! ಅದು ಹೇಗೆ? ಸಮಸ್ಯೆ ಏನೆಂದರೆ ನಮಗೆ ಗೊತ್ತಿಲ್ಲ ಅನ್ನುವ ಹೆದರಿಕೆ. ನನಗೆ ಏನೂ ಗೊತ್ತಿಲ್ಲ ಎನ್ನುವುದು ಗೊತ್ತು ಎಂಬ ಸಾಧ್ಯತೆಗೆ ದಾರಿ ಮಾಡಿ ಕೊಡುತ್ತದೆ. ಯಾವುದು ನಿಮಗೆ ಗೊತ್ತಿಲ್ಲವೋ ಅದನ್ನು ನೀವೇ ಸೃಷ್ಟಿಸಿ ನಂಬುತ್ತೀರಿ. ನಿಮ್ಮ ಈ ನಂಬಿಕೆ ನಿಮ್ಮವರೊಡನೆ ಇದ್ದಾಗ ಮಾತ್ರ ಕೆಲಸ ಮಾಡುತ್ತದೆ. ಆದರೆ ಬೇರೆ ಜಗಕ್ಕೆ ಹೋದಾಗ ಅಲ್ಲಿಯವರು ನಿಮ್ಮ ನಂಬಿಕೆಯನ್ನು ಪರಿಹಾಸ್ಯ ಮಾಡುತ್ತಾರೆ. ಅವರಿಗೆ ಅವರದ್ದೇ ಆದ ನಂಬಿಕೆಗಳು ಇರುತ್ತವೆ. ನಿಮಗೆ ಅವರ ನಂಬಿಕೆಗಳು ದಡ್ಡತನದಿಂದ ಕೂಡಿದೆ ಎಂದನಿಸುತ್ತದೆ. ಆದರೆ, ನಿಮ್ಮ ಅಗ್ನಾನದ ಅರಿವು ನಿಮಗೆ ಆಗುವುದಿಲ್ಲ ಅನ್ನುವುದೇ ಮುಖ್ಯ ಸಮಸ್ಯೆ. ಗ್ನಾನ ಸೀಮಿತಿವಾಗಿರುತ್ತದೆ; ಆದರೆ ಅಗ್ನಾನ ಪ್ರಬಲ. ಏಕೆಂದರೆ ಅದು ಅಸೀಮ. ಅಲ್ಲವೇ?

ಆದ್ದರಿಂದ ಯೋಗದಲ್ಲಿ, ಯೋಗಿಯು ತನ್ನನ್ನು ತಾನೇ ಏನೂ ತಿಳಿಯದವನು/ಳು ಎಂದು ಭಾವಿಸುತ್ತಾನೆಯೇ ಹೊರತು ಗ್ನಾನಿಯೆಂದಲ್ಲ. ಏಕೆಂದರೆ ನಾವು ಎಷ್ಟು ತಿಳಿದವರೆಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಅದು ಬಹಳ ಅಲ್ಪವಾದುದು. ನಮಗೆ ಗೊತ್ತಿಲ್ಲದಿರುವುದಕ್ಕೆ ಮಿತಿಯಿಲ್ಲ. ನಾವು ಎಷ್ಟು ತಿಳಿಯದವರಂತೆ ಇರುತ್ತೇವೆಯೋ ಅಷ್ಟೇ ಕೊನೆಯಿಲ್ಲದೆ ಬೆಳೆಯುತ್ತೇವೆ. ಯಾವಾಗ ನೀವು ಗ್ನಾನಿಗಳೆಂದು ಗುರುತಿಸಿ ಕೊಳ್ಳುತ್ತೀರೋ, ಆಗ ನೀವು ಒಂದು ಕೂಪ ಮಂಡೂಕವಾಗಿಬಿಡುತ್ತೀರಿ. ನೀವು ತಿಳಿದಷ್ಟನ್ನೇ ಎಲ್ಲವೂ ಎಂದು ಭಾವಿಸಿಬಿಡುತ್ತೀರಿ. ನಿಮ್ಮ ಆ ಪುಟ್ಟ ಕೂಪದಲ್ಲಿ ನೀವೇ ದೊಡ್ಡವರಾಗಬಹುದು. ಆದರೆ, ಬೇರೆಡೆ ನೀವು ಯಾರೂ ಆಗುವುದಿಲ್ಲ.

ನೀವು ಆಗಸದತ್ತ ನೋಡಿದರೆ, ನೀವು ಎಷ್ಟೇ ನೋಡಿದರೂ ಒಂದು ತೃಣವಷ್ಟೇ ಅಲ್ಲವೇ? ನೀವು ಲೆಕ್ಕವಿಲ್ಲದಷ್ಟು ಪರಿಶೋಧಿಸಬಹುದು. ಹಲವಾರು ರಾಕೆಟ್ಗಳನ್ನೇ ಕಳುಹಿಸಬಹುದು. ಆದರೆ, ಈ ಸೃಷ್ಠಿಯ ಒಂದು ತೃಣವನ್ನೂ ಸಹಿತ ಅರ್ಥಮಾಡಿಕೊಂಡಿರಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಸಮಸ್ಯೆಯೇನೆಂದರೆ, ನಾವು ನಮಗೆ ತಿಳಿದ ಸ್ವಲ್ಪವೇ ಎಲ್ಲವೂ ಎಂದು ಭಾವಿಸುತ್ತಾ ತಿಳಿಯದ್ದನ್ನೂ ತಿಳಿದಂತೆ ಊಹಿಸಿಕೊಳ್ಳುತ್ತಾ, ಈ ಕಲ್ಪನೆಗಳಿಂದ ನಮ್ಮ ಜೀವನದ ಮೂಲಭೂತ ಯಥಾರ್ಥವನ್ನೇ ನೇರವಾಗಿ ಅರ್ಥೈಸಿಕೊಳ್ಳಲು ವಿಫಲರಾಗಿದ್ದೇವೆ. ನಮಗೆ ಅರಿವಿಲ್ಲದ್ದನ್ನು ಅರಿವಿಲ್ಲ ಎಂದು ಹೇಳಲು ಸವಿಸ್ತಾರವಾದ ಕಥೆಗಳನ್ನೇ ಹೇಳುತ್ತೇವೆ.

ಆದರೆ, ಇಲ್ಲಿ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭಾರತದಲ್ಲಿ ಪೂಜಿಸುವ ಪ್ರತಿಯೊಬ್ಬ ದೇವ ದೇವತೆಯೂ ಶಿವ, ರಾಮ, ಕೃಷ್ಣ ಯಾರೇ ಆಗಿರಲಿ. ಇವರೆಲ್ಲಾ ಈ ಭೂಮಿಯಲ್ಲಿ ನಡೆದಾಡಿದವರೇ ಅವರೇನು ಎಲ್ಲಿಂದಲೋ ಉದುರಿದವರಲ್ಲ. ಎಲ್ಲರೂ ತಮ್ಮ ತಾಯಂದಿರಿಂದ ಸಹಜವಾಗಿಯೇ ಜನ್ಮ ಪಡೆದವರೇ. ತಮ್ಮ ಜೀವನವನ್ನು ಸರ್ವ ಸಾಮಾನ್ಯರಂತೆಯೇ ನಡೆಸಿದರು. ಪರೀಕ್ಷೆಗಳನ್ನು ಎದುರಿಸಿದರು. ಕಷ್ಟಗಳನ್ನು ಅನುಭವಿಸಿದರು. ಆದರೆ ಅವರನ್ನು ಜೀವನವು ಏನೂ ಮಾಡಲಿಲ್ಲ. ಜೀವನವು ಅವರನ್ನು ಯಾವುದೇ ರೀತಿಯಾಗಿ ಮಾರ್ಪಡಿಸಲಿಲ್ಲ. ಬದುಕು ಏನೆಲ್ಲಾ ಸವಾಲೊಡ್ಡಿದರೂ ಅವರು ತಮ್ಮತನವನ್ನ ಉಳಿಸಿಕೊಂಡು ಜಯಿಸಿದರು. ಆದ್ದರಿಂದಲೇ ನಾವು ಅವರನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ; ಬರೀ ಅವರು ಜಯಶಾಲಿಗಳೆಂದಷ್ಟೇ ಅಲ್ಲ. ನಾನು ಹೀಗೇಕೆ ಹೇಳುತ್ತೇನೆಂದರೆ ಅವರು ಜೀವನದಲ್ಲಿ ಅತ್ಯಂತ ಯಶಸ್ವಿಗಳಾಗೇನೂ ಇರಲಿಲ್ಲ.

ಉದಾಹರಣೆಗೆ, ರಾಮನು ನಮ್ಮ ದೇಶದಲ್ಲಿ ಅತ್ಯಂತ ಪೂಜಿಸಲ್ಪಡುವ ದೇವರು…

ಮುಂದುವರೆಯುವುದು…

– ಮಲ್ಲಿಕಾರ್ಜುನ ಮುದನೂರ್

Related Articles

Leave a Reply

Your email address will not be published. Required fields are marked *

Back to top button