ಬಸವಭಕ್ತಿ

ನಾಗಪ್ಪ ಹೆಡೆ ಎತ್ತಿ ದರ್ಶನ ನೀಡುತ್ತಿರುವದೇಕೆ ಗೊತ್ತೆ..?

ಅರ್ಧಕ್ಕೆ ನಿಂತ ಮಂದಿರ ಕಾರ್ಯ ಪೂರ್ಣಗೊಳಿಸುವ ಸೂಚನೆ

ಯಾದಗಿರಿಃ ತಾಲೂಕಿನ ವರ್ಕನಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಕಳೆದ ಎರಡು ಮೂರು ದಿನದಿಂದ ಭಕ್ತಾಧಿಗಳಿಗೆ ದರ್ಶನ ನೀಡುತ್ತಿರುವ ನಾಗರ ಹಾವು ಸಾಕ್ಷಾತ್ ಹನುಮಂತನೇ ನಾಗಪ್ಪನ ರೂಪದಲ್ಲಿ ಕಾಣುತಿದ್ದಾನೆ ಎಂದು ಗ್ರಾಮಸ್ಥರು ಭಜನೆ ಕಿರ್ತನ ಆರಂಭಿಸಿದ್ದಾದರೆ.

ಈ ಆಂಜನೇಯನ ದೇವಸ್ಥಾನ ಕಟ್ಟಡ ಅರ್ಧಕ್ಕೆ ನಿಂತಿರುವ ಕಾರಣ ಹನುಮ ನಾಗಪ್ಪನ ಸ್ವರೂಪದಿ ಬಂದು ಆಂಜನೇಯನ ಮೂರ್ತಿ ಮೇಲೆ ಮತ್ತು ದೀಪದ ಆಗಾಗ ಹೆಡೆ ಎತ್ತಿ ದರ್ಶನ ನೀಡುವ ಮೂಲಕ ಬಾಕಿ ಕಟ್ಟಡ ಪೂರ್ಣಗೊಳಿಸುವ ಮೂಲಕ ಹನುಮ ದೇವರಿಗೆ ನೆರಳು ಒದಗಿಸಬೇಕೆಂದು ಕೋರುತ್ತಿದೆ.

ಅಲ್ಲದೆ ಕಟ್ಟಡ ಪೂರ್ಣಗೊಂಡಲ್ಲಿ ಗ್ರಾಮಕ್ಕೆ ಬೆಳಕು ನೀಡುವುದಾಗಿ ಇಲ್ಲವಾದಲ್ಲಿ ಇಡಿ ಗ್ರಾಮಕ್ಕೆ ಕತ್ತಲಾವರಿಸಲಿದೆ ಎಂಬ ಸಂದೇಶ ನೀಡುತ್ತಿದೆ ಎಂದು ನಾಗರ ಹಾವಿನ ನಡವಳಿಕೆ ನೋಡಿ ಸ್ವಾಮೀಜಿಯೊಬ್ಬರು ಭಕ್ತಾಧಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಭಕ್ತಾದಿಗಳು ದೇವಸ್ಥಾನದ ಮುಂದೆ ಭಜನೆ ಆರಂಭಿಸಿದ್ದು, ಕಟ್ಟಡ ಪುನಃ ಆರಂಭಿಸುವ ಕುರಿತು ಗ್ರಾಮಸ್ಥರು ಮಾತುಕತೆ ನಡೆಸುತಿದ್ದು, ದೇಣಿಗೆ ಸಂಗ್ರಹಿಸಿ ಕಟ್ಟಡ ಪೂರ್ಣಗೊಳಿಸಬೇಕೆ ಅಥವಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ವಿಷಯ ತಿಳಿಸಿ ಸರ್ಕಾರಿ ಇಲಾಕೆವತಿಯಿಂದ ಅನುದಾನ ಪಡೆದ ಮುಂದುರೆಸಬೇಕೋ ಎಂಬ ನಿರ್ಧಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button