ನಂದಿಕೂರ ತಾಂಡಾ-ರಸ್ತೆ ಅಪಘಾತ ಓರ್ವನ ಸಾವು, ಆಕ್ರೋಶಗೊಂಡ ನಾಗರಿಕರಿಂದ ರಸ್ತೆ ತಡೆ
ರಸ್ತೆ ಅಪಘಾತ ಓರ್ವನ ಸಾವು,- ನಾಗರಿಕರಿಂದ ರಸ್ತೆ ತಡೆ, ಟ್ರಾಫಿಕ್ ಜಾಮ್
ಕಲಬುರ್ಗಿಃ ನಗರ ಸಮೀಪದ ನಂದಿಕೂರ ತಾಂಡಾ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟಾಟಾ ಏಸ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ (ಬುಧವಾರ) ರಾತ್ರಿ 9 ಗಂಟೆಗೆ ನಡೆದಿದೆ.
ಆಕ್ರೋಶಗೊಂಡ ತಾಂಡಾ ನಾಗರಿಕರಿಂದ ರಸ್ತೆ ತಡೆ ನಡೆಸುತ್ತಿದ್ದು, ಅಪಘಾತ ನಡೆದ ಸ್ಥಳದಲ್ಲಿ ಸ್ಪೀಡ್ ಬ್ರೇಕ್ ಹಾಕಲು ಸಾಕಷ್ಟು ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂಧನೆ ನೀಡಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಪಿಡಬ್ಲೂಡಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪೀಡ್ ಬ್ರೇಕ್ ಅಳವಡಿಸುವ ಭರವಸೆ ನೀಡುವವರೆಗೂ ರಸ್ತೆ ಬಿಟ್ಟು ಹೇಳುವದಿಲ್ಲ ಅಲ್ಲದೆ ಅಪಘಾತದಲ್ಲಿ ಮೃತಪಟ್ಟ ದೇಹವು ತೆಗೆಯಲು ಬಿಡುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಪೊಲೀಸರ ವಿರುದ್ಧವು ನಾಗರಿಕರು ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಹರಸಾಹಸ ಪಟ್ಟರು ರಸ್ತೆ ತಡೆಯಿಂದ ಸಾರ್ವಜನಿಕರು ಹಿಂದೆ ಸರಿಯುತ್ತಿಲ್ಲ ಎನ್ನಲಾಗಿದೆ.
ಇತ್ತ ಎರಡು ಬದಿ ಟ್ರಾಫಿಕ್ ಲೈನ್ ನಾಲ್ಕೈದು ಕೀ.ಮೀವರೆಗೂ ವಾಹನಗಳು ನಿಂತಿವೆ. ಹೀಗಾಗಿ ಪ್ರಯಾಣಿಕರು ತುಂಬ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳದಲ್ಲಿದ್ದ ಕಳೆದ ಎರಡು ತಾಸಿನಿಂದ ಪರದಾಡುತ್ತಿರುವ ಪ್ರಯಾಣಿಕರಲ್ಲಿ ಒಬ್ಬರಾದ ಡಾ.ಆನಂದಕುಮಾರ ವಿನಯವಾಣಿಗೆ ತಿಳಿಸಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಸ್ತೆ ತಡೆನಡೆಸುತ್ತಿರುವ ಜನರಿಗೆ ಸ್ಪೀಡ್ ಬ್ರೇಕ್ ಅಳವಡಿಸುವ ಭರವಸೆ ನೀಡುವ ಮೂಲಕ ರಸ್ತೆ ಸಂಚಾರ ಸುಗಮಕ್ಕೆ ಅನುಕೂಲ ಕಲ್ಪಿಸುವ ಅಗತ್ಯವಿದೆ.