ಪ್ರಮುಖ ಸುದ್ದಿ

ಕೊರೊನಾಃ ಕೈತೊಳೆಯಲು ಸಂಚಾರಿ ಟ್ಯಾಂಕ್, ಜೆಸ್ಕಾಂ ನೌಕರನ ಸೇವೆ

ಕೈತೊಳೆಯಲು ಸಂಚಾರಿ ನೀರಿನ ಟ್ಯಾಂಕ್ ಸೇವೆ

ಶಹಾಪುರಃ ಎಲ್ಲಡೆ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ನಗರದ ಜೆಸ್ಕಾಂ ನೌಕರ ಎಕ್ಬಾಲ್ ಲೋಹಾರಿ ಅವರು, ಆಟೋವೊಂದರಲ್ಲಿ ನೀರಿನ ಟ್ಯಾಂಕ್ ಇರಿಸಿ, ಅದರಡಿಯಲ್ಲಿ ಸ್ಯಾನಿಸೈಸರ್ ಬಳಸಿ, ಸಾರ್ವಜನಿಕರಿಗೆ ಕೈ ತೊಳೆಯಲು ನಗರದಾದ್ಯಂತ ಸಂಚರಿಸುವ ಆಟೋ ವ್ಯವಸ್ಥೆ ಮಾಡುವ ಮೂಲಕ ಮಾದರಿ ನೌಕರ ಎನಿಸಿದ್ದಾರೆ.

ಸೋಮವಾರ ನಗರದ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ತರಕಾರಿ ಮಾರ್ಕೇಟ್ ಸೇರಿದಂತೆ ಪ್ರಮುಖ ರಸ್ತೆ ಮೇಲೆ ಸ್ಯಾನಿಟೈಸರ್ ಬಳಸಿದ ನೀರಿನ ಟ್ಯಾಂಕ್ ಎಲ್ಲಡೆ ಸಂಚರಿಸುವ ಮೂಲಕ ನಾಗರಿಕರಿಗೆ ಕೈ ತೊಳೆಯಲು ಅನುಕೂಲ ಕಲ್ಪಿಸಿದ್ದಾರೆ.

ನಗರದ ಪ್ರಮುಖ ರಸ್ತೆಗೆ ಬಂದರೆ ನಿಮಗೆ ಈ ಟ್ಯಾಂಕ್ ಹೊತ್ತ ಆಟೋ ಕಾಣುತ್ತದೆ. ಜನರಿರುವ ಸ್ಥಳಕ್ಕೆ ಇದು ಒಯ್ಯಲಾಗುತ್ತಿದ್ದು, ಕಾಲ ಕಾಲಕ್ಕೆ ಕೈ ತೊಳೆದುಕೊಳ್ಳುವ ಮೂಲಕ ಕೊರೊನಾ ತಡೆಗೆ ಸಹಕರಿಸಬೇಕೆಂದು ಅವರು ಸಂದೇಶ ನೀಡುತ್ತಿದ್ದಾರೆ. ಇವರ ಸೇವೆ ಕಂಡು ಹಲವಾರು ಜನರು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊರೊನಾ ಕುರಿತು ಜಾಗೃತಿ ಅಗತ್ಯವಿದ್ದು, ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಾನು ಸ್ವಂತ ಖರ್ಚಿನಲ್ಲಿ ಆಟೋ ಒಳಗಡೆ ನೀರಿನ ಟ್ಯಾಂಕ್ ಇಟ್ಟು ಕೈತೊಳೆದುಕೊಳ್ಳಲು ಸಾರ್ವಜನಿಕರಿಗೆ ಸಾದ್ಯವಾದಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿದ್ದೇನೆ. ಎಲ್ಲವೂ ಸರ್ಕಾರ ಮಾಡಲಿ ಎಂದರೆ ಹೇಗೆ.? ಎಲ್ಲರೂ ಕೈಲಾದ ಸೇವೆ ಇಂತಹ ಸ್ಥಿತಿಯಲ್ಲಿ ಮಾಡುವದು ಅಗತ್ಯವಿದೆ.

-ಎಕ್ಬಾಲ್ ಲೋಹಾರಿ. ಜೆಸ್ಕಾಂ ನೌಕರ.

Related Articles

Leave a Reply

Your email address will not be published. Required fields are marked *

Back to top button