ಮತ್ತೆ ಮುಳುಗಡೆ ಭೀತಿಯಲ್ಲಿ ಕೊಳ್ಳೂರ ಸೇತುವೆ
ಮಹಾರಾಷ್ಟ್ರದಲ್ಲಿ ಮಹಾ ಮಳೆ ಮತ್ತೆ ಕೃಷ್ಣಾ ತೀರದ ಜನ ಆತಂಕ
ನೀಲಕಂಠರಾಯನ ಗಡ್ಡಿ ಜನರ ಜೀವನ ಮತ್ತೆ ಕಂಟಕ
ಯಾದಗಿರಿಃ ಜಿಲ್ಲೆಯ ಶಹಾಪುರದಿಂದ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೊಳ್ಳೂರ ಸೇತುವೆ ಮತ್ತೆ ಮುಳುಗುವ ಭೀತಿ ಆವರಿಸಿದೆ.
ಸೇತುವೆ ಮುಳಗಲು ಕೇವಲ ಎರಡು ಅಡಿ ಮಾತ್ರ ಬಾಕಿ ಇದ್ದು,
ಮತ್ತೊಮ್ಮೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಮತ್ತೆ ಕೃಷ್ಣಾ ಪ್ರವಾಹ ಉಂಟಾಗುತ್ತಿದೆ. ಹೀಗಾಗಿ ನದಿ ತೀರ ಗ್ರಾಮದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಅಲ್ಲದೆ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ಈಗಾಗಲೇ ಸಂಪರ್ಕ ಕಡಿತಗೊಂಡಿದ್ದು, ಗಡ್ಡಿಯಲ್ಲಿ ಸಿಲುಕಿದ ಗ್ರಾಮಸ್ಥರು ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿಯೇ ಈಜಾಡಿ ಪಟ್ಟಣಕ್ಕೆ ಆಗಮಿಸಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಿ ವಾಪಾಸ್ ಗಡ್ಡಿಗೆ ತೆರಳುತ್ತಿರುವದು ಕಂಡುಬರುತ್ತಿದೆ.
ಸರಕಾರ ನಿರ್ಮಿಸಿದ ಸೇತುವೆ ಮೂಲಕ ನಡೆದುಕೊಂಡು ಬಂದು ನಂತರ 50 ಮೀಟರ್ ವರಗೆ ಈಜುತ್ತಾ ಬಂದ ಗಡ್ಡಿ ಜನರು ಅಗತ್ಯ ಸಾಮಾಗ್ರಿ ಆಹಾರ ಧಾನ್ಯಗಳನ್ನು ನದಿಯಲ್ಲಿಯೇ ಈಜುತ್ತಾ ತೆರಳಿದರು.