ಶಹಾಪುರ ಧರಣಿ ಸ್ಥಳಕ್ಕೆ ಜಿಪಂ ಅಧ್ಯಕ್ಷ ಬಸರಡ್ಡಿ ಭೇಟಿ ಭರವಸೆಃ ಧರಣಿ ವಾಪಾಸ್
ಜಿಪಂ ಅಧ್ಯಕ್ಷ, ಡಿಡಿಪಿಐ ಗೌನಳ್ಳಿ ಭೇಟಿಃ ಧರಣಿ ವಾಪಸ್
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಬಿ.ಇ.ಓ ಕಚೇರಿ ಮುಂದೆ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ವತಿಯಿಂದ ಬಿ.ಇ..ಓ ಅಮಾನತಿಗಾಗಿ ಕೈಗೊಂಡ ಧರಣಿ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸರಡ್ಡಿ ಅನಪುರ ಬುಧವಾರ ತಡ ಸಂಜೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಬಿಇಓ ಮೇಲೆ ಈಗಾಗಲೇ ಬಂದಿರುವ ಜಾತಿ ನಿಂದನೆ ಮತ್ತು ಭ್ರಷ್ಟಾಚಾರದ ಆರೋಪವನ್ನು ಜಿಪಂವತಿಯಿಂದ ಪರಿಶೀಲಿಸಿ ಕೂಡಲೇ ಅವರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೆ ನಿಮ್ಮ ಬೇಡಿಕೆಯಂತೆ ಆರ್ಟಿಇ ಅನುದಾನ ಬಿಡುಗಡೆ ಮಾಡುವಲ್ಲಿ ಬೇಕಾಗುವ ಹೆಬ್ಬರಳಿನ ನೋಂದಣಿಯನ್ನು ಬೇರೊಬ್ಬ ಅಧಿಕಾರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಕಾರಣ ಕೂಡಲೇ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು.
ಜಿಪಂ ಅಧ್ಯಕ್ಷ ಹಾಗೂ ಸಾರ್ವಜನಿಕ ಶಿಕ್ಷಣ ಇಆಖೆ ಉಪನಿರ್ದೇಶಕ ಬಸವರಾಜ ಗೌನಳ್ಳಿಯವರ ಭರವಸೆ ಮೇರೆಗೆ ಧರಣಿ ನಿರತರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಿಂಪಡೆದರು. ಈ ಸಂದರ್ಬದಲ್ಲಿ ಮುಖಂಡ ಮಲ್ಲಿಕಾರ್ಜುನ ಪೂಜಾರಿ, ಶಿವುಕುಮಾರ ತಳವಾರ, ಸಂಘದ ಅಧ್ಯಕ್ಷ ಆರ್.ಚನ್ನಬಸ್ಸು, ಹೊನ್ನಪ್ಪ ಗಂಗನಾಳ ಸೇರಿದಂತೆ ಇತರರಿದ್ದರು.