ಪ್ರಮುಖ ಸುದ್ದಿ
ಜೂಜಾಟ 13 ಮಂದಿ ಬಂಧನ
ಸಗರ ಗ್ರಾಮದಲ್ಲಿ ಜೂಜಾಟ 13 ಮಂದಿ ಬಂಧನ
ಯಾದಗಿರಿಃ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 13 ಜನ ಆರೋಪಿಗಳನ್ನು ಬಂಧಿಸಿ, 6230 ರೂ. ವಶಕ್ಕೆ ಪಡೆದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಜೂಜಾಟವಾಡುತ್ತಿದ್ದ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 13 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಶಹಾಪುರ ಸಿಪಿಐ ನಾಗರಾಜ ಜೆ, ನೇತೃತ್ವದಲ್ಲಿ ಎ.ಎಸ್ಐ ನಬಿಲಾಲ, ಪಿಸಿಗಳಾದ ರಾಮಪ್ಪ, ಹೊನ್ನಪ್ಪ, ಶರಣಗೌಡ, ಗಣೇಶ, ಗಜೇಂದ್ರ, ಹಣಮಂತ, ಲಕ್ಕಪ್ಪ, ಸಂಗನಬಸ್ಸಪ್ಪ ಅಕ್ಕಿಯವರು ತಂಡ ದಾಳಿ ನಡೆಸಿತ್ತು. ಶಹಾಪುರ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.