ಅಂಕಣ

ಪ್ರಾಧಿಕಾರದಿಂದ ಉಚಿತ ಕಾನೂನು ಸೌಲಭ್ಯ ಪಡೆಯಿರಿ-ನ್ಯಾ.ಕುಲ್ಕರ್ಣಿ

ಕಾನೂನು ಪ್ರಾಧಿಕಾರ ಬಡವರ ಧ್ವನಿ-ನ್ಯಾ.ಕುಲ್ಕರ್ಣಿ

ಯಾದಗಿರಿ, ಶಹಾಪುರಃ ಕಾನೂನು ಪ್ರಾಧಿಕಾರಕ್ಕೆ ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ವ್ಯಾಜ್ಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಣಮಂತರಾವ್ ಕುಲ್ಕರ್ಣಿ ಹೇಳಿದರು.

ತಾಲೂಕಿನ ಗುಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ (ಕಾನೂನು ಸಾಕ್ಷರತ ರಥ)ದಲ್ಲಿ ಭಾಗವಹಿಸಿ ಮಾತನಾಡಿದರು.

ಸಣ್ಣಪುಟ್ಟ ತೊಡಕಿನಲ್ಲಿ ಸಿಲುಕಿಕೊಂಡು ಪರದಾಡುವ ಜನಸಾಮಾನ್ಯರ ಧ್ವನಿಯಾಗಿ ಕಾನೂನು ಪ್ರಾಧಿಕಾರ ವಕೀಲರ ಸಂಯೋಗದೊಂದಿಗೆ ಉಚಿತವಾಗಿ ಕೆಲಸ ಮಾಡಲಿದೆ. ಹೀಗಾಗಿ ಕೋರ್ಟನಲ್ಲಿ ಪ್ರಕರಣ ನಡೆಸುವಷ್ಟು ದುಡ್ಡಿಲ್ಲದೆ, ಕಾನೂನಿಂದ ವಂಚಿತಗೊಳ್ಳುವಂತವರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತವರ ಪರ ಪ್ರಾಧಿಕಾರ ಉಚಿತವಾಗಿ ಕೇಸ್ ನಡೆಸಲಿದೆ. ಬಡವರು ಜನ ಸಾಮಾನ್ಯರು ಸದುಪಯೋಗ ಪಡೆಯಬಹುದು.

ಭಾರತೀಯ ಸಂವಿಧಾನ ಆಶಯದಂತೆ ನ್ಯಾಯದಾನ ನಿರಂತರವಾಗಿ ಸರ್ವರಿಗೂ ಸಿಗುವಂತೆ ಪ್ರಾಧಿಕಾರ ಕಾರ್ಯ ಮಾಡುತ್ತಿದೆ ಎಂದರು.

ಮಹಿಳೆಯರ ಹಕ್ಕುಗಳ ಕುರಿತು ನ್ಯಾಯವಾದಿ ಬಸಮ್ಮ ರಾಂಪೂರೆ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ಗ್ರಾಪಂ ಉಪಾಧ್ಯಕ್ಷ ಬಸವರಾಜ ವಗ್ಗಾ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್, ಪಿಡಿಓ ಅಕ್ಕನಾಗಮ್ಮ ಪಾಟೀಲ್, ತಾಪಂ ಸದಸ್ಯ ಪರಶುರಾಮ ಕುರಕುಂದಿ ಉಪಸ್ಥಿತರಿದ್ದರು. ಸಂತೋಷ್ ಸತ್ಯಂಪೇಟೆ ನಿರೂಪಿಸಿದರು. ಬಸಬಗೌಡ ಹಯ್ಯಾಳ ಸ್ವಾಗತಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button