ಪ್ರಮುಖ ಸುದ್ದಿಬಸವಭಕ್ತಿ

ಜ್ಞಾನ, ಧ್ಯಾನ, ಯೋಗದಿಂದ ಭಗವಂತನ ಕಾಣಿ – ಸುಭುದೇಂದ್ರತೀರ್ಥ ಶ್ರೀ

ಐಕೂರ ಆಚಾರ್ಯರ ಆರಾಧಾನ ಮಹೋತ್ಸವ

ಯಾದಗಿರಿ,ಶಹಾಪುರಃ ಮನುಷ್ಯ ಋಣಬಾಧೆಗಳಿಂದ ಮುಕ್ತಿ ಹೊಂದಲು ಮೊದಲು ಅಗ್ನಿಯನ್ನು ಒರಿಸಬೇಕು. ನಂತರದಲ್ಲಿ ಶಾಂತತೆಯಿಂದ ಯಜ್ಞಯಾಗಾದಿಗಳ ಮೂಲಕ ಜಪ ತಪ ಕೈಗೊಂಡಲ್ಲಿ ಋಣಮುಕ್ತರಾಗಲು ಸಾದ್ಯವಾಗಲಿದೆ ಎಂದು ಮಂತ್ರಾಲಯದ ರಾಯರಮಠದ ಪೀಠಾಧಿಪತಿ ಶ್ರೀಶ್ರೀ 1008 ಸುಭುದೇಂದ್ರತೀರ್ಥ ಶ್ರೀಗಳು ತಿಳಿಸಿದರು.

ತಾಲೂಕಿನ ಐಕೂರ ಗ್ರಾಮದಲ್ಲಿ ನಡೆಯುತ್ತಿರುವ ಐಕೂರ ಆಚಾರ್ಯರ ಆರಾಧಾನ ಮಹೋತ್ಸವದ ನಿಮಿತ್ತ ಮೂರು ದಿನಗಳ ಕಾಲ ಜ್ಞಾನಸತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಋಣಶೇಷಗಳಿಂದ ಮಾನವನಿಗೆ ಜ್ಞಾನದ ಅರಿವು ವೃದ್ಧಿಸುತ್ತದೆ. ಅಜ್ಞಾನ ಜೀವನ ಸ್ವರೂಪವನ್ನು ಜ್ಞಾನ ಬದಲಾಯಿಸಲಿದೆ. ಜ್ಞಾನ ಧ್ಯಾನ ಮತ್ತು ಯೋಗಗಳಿಂದ ಭಗವಂತನನ್ನು ಕಾಣಬಹುದು. ಮನಸ್ಸಿನ ನೆಮ್ಮದಿಗೆ ಸಂತರ, ಜ್ಞಾನಿಗಳ ಆರಾಧನೆ ಅಗತ್ಯ. ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಆರೋಗ್ಯ ಸೀಮಿತ ಸ್ಥಿತಿಗೆ ತರಲಿವೆ. ಯಾವುದೇ ಸಮಸ್ಯೆಗಳಿಂದ ನರಳುತ್ತಿದ್ದರೆ, ಬಗೆಹರಿಯದ ಸಮಸ್ಯೆಯಂದ ಕೊರಗುವದಕ್ಕಿಂದ ಭಗವಂತನ ಆರಾಧನೆ ಮಾಡಿದ್ದಲ್ಲಿ ಎಲ್ಲವೂ ಸರಿ ಹೋಗಲಿದೆ.

ಬಂದ ಆಪತ್ತು ಬರಲಿರುವ ಮುಪ್ಪು ನೆನಸಿಕೊಂಡು ಸೊರಗುವದಕ್ಕಿಂತ ಧಾರ್ಮಿಕ ಕಾರ್ಯಕೈಗೊಳ್ಳುವ ಮೂಲಕ ಉತ್ತಮ ಫಲಗಳನ್ನು ಪಡೆಯಬಹುದು. ನಿತ್ಯ ದೇವ ಸ್ಮರಣೆಯಿಂದ ಬದುಕು ರೂಢಿಸಿಕೊಂಡಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಜೀವನ ಕಟ್ಟಿಕೊಳ್ಳಬಹುದು.

ದೇವೋಪಾಸನೆ, ಪೂಜೆ ಸತ್ಸಂಗ ಆರಾಧನೆ ಮೂಲಕ ಮನಸ್ಸನ್ನು ಪ್ರಫುಲ್ಲತೆಗೆ ಕೊಂಡೊಯ್ಯಲು ಸಾಧ್ಯವಿದೆ. ಮಕ್ಕಳನ್ನು ಸತ್ಸಂಗ, ಆರಾಧನೆಗಳಂತ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಅನವು ಮಾಡಿಕೊಳ್ಳಬೇಕು. ಉತ್ತಮ ಸಂಸ್ಕಾರದಿಂದ ಮಕ್ಕಳು ಮುಂದೆ ಸಂಸಾರದ ಒತ್ತಡವನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಕಲಿಯಲಿದ್ದಾರೆ. ಎಲ್ಲದ್ದಕ್ಕೂ ಧಾರ್ಮಿಕತೆಯೇ ಮದ್ದು ಎಂಬುದನ್ನು ಅರಿತು ನಡೆಯಬೇಕು. ಬದುಕಿನಲ್ಲಿ ಅನ್ವಯಿಸಿಕೊಂಡು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಗಳಿಗೆ ತುಲಾಭಾರ ನೆರವೇರಿಸಿಲಾಯಿತು. ಮುಂಚಿತವಾಗಿ ಸುಭುದೇಂಧ್ರತೀರ್ಥ ಶ್ರೀಗಳನ್ನು ವಾಹನವೊಂದರಲ್ಲಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಭಕ್ತಗಣದೊಂದಿಗೆ ಶ್ರೀಗಳು ಪುರಪ್ರವೇಶ ಮಾಡಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button