ಕಾವ್ಯ

“ಕಂಗಳಾದವು ಜೋಗ” ಮುದನೂರ ರಚಿತ ಕವನ

“ಕಂಗಳಾದವು ಜೋಗ”

ಹೊರಗಡೆ ಸುಂಯಿಗುಡುತ್ತಿರುವ ಮಳೆ ನಾದ,
ಹಚ್ಚ ಹಸಿರು ಹೊತ್ತು ನಿಂತ
ಗುಡ್ಡಗಾಡಿಗೆ ಮನಸೋತ ಮಾದ,

ಮಳೆ, ಪ್ರವಾಹಕೆ ಹೊಲ, ಗದ್ದೆ ಬೆಳೆ
ನಾಶ,
ರೈತರ ಕಂಗಳಾಗಿವೆ ಜೋಗದ
ಬಿಂಬಾಂಶ,

ಕೊರೊನಾ ಆರ್ಭಟದಿಂದ ದಂಗಾದ
ಮಾನವ ಕುಲ,
ಬೆಂಬಿಡದ ಮಹಾಮಾರಿ ಕೊರೊನಾ
ಎಂಬ ಹುಳ,

ಈ‌ ನಡುವೆ ಸಾಲು ಸಾಲು ಹಬ್ಬಗಳ
ಆಗಮನ,
ಸಂಭ್ರಮದ ಕ್ಷಣಗಳಿಗೆ ಕೋವಿಡ್
ಹಾಕಿದೆ ದಿಗ್ಬಂಧನ.

– ಮಲ್ಲಿಕಾರ್ಜುನ ಮುದನೂರ.

ಗಮನಿಸಿಃ ಬಿಂಬ+ಅಂಶ=ಬಿಂಬಾಂಶ

Related Articles

2 Comments

  1. ವಾಸ್ತವಿಕ ಪರಿಸ್ಥಿತಿಯನ್ನು ಕುರಿತು ಚೆನ್ನಾಗಿ ಮೂಡಿಬಂದಿದೆ ಸರ್. ಅಭಿನಂದನೆಗಳು ಸರ್.

Leave a Reply

Your email address will not be published. Required fields are marked *

Back to top button