ಮೈಲಾರಲಿಂಗನ ಪಲ್ಲಕ್ಕಿ ಮೇಲೆ ಕುರಿಮರಿ ಎಸೆದ ಭಕ್ತರು..! ಸಾವಿರಕ್ಕೂ ಹೆಚ್ಚು ಕುರಿಮರಿ ವಶಕ್ಕೆ
ಯಾದಗಿರಿಃ ಇಲ್ಲಿನ ಸಮೀಪದ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆ ಪ್ರತಿ ಸಂಕ್ರಾಂತಿ ಹಬ್ಬದಂದು ವಿಶೇಷ ದರ್ಶನ ಪಡೆಯಲು ಜನ ಸಾಗರವೇ ಸೇರುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಹರಕೆಹೊತ್ತ ಭಕ್ತರು ಮೈಲಾರಲಿಂಗನ ಸನ್ನಿಧಿಯಿಂದ ಕುರಿ ಮರಿಗಳನ್ನು ಎಸೆಯುವ ಪದ್ದತಿ ಮೊದಲಿಂದಲೂ ಬಂದದ್ದಾಗಿದೆ.
ಆದರೆ ಈ ಸಂಪ್ರದಾಯಕ್ಕೆ ಕಳೆದ ಐದು ವರ್ಷದಿಂದ ಜಿಲ್ಲಾಡಳಿ ನಿಷೇಧವೇರಿದ್ದು, ಕುರಿ ಮರಿಗಳನ್ನು ಎಸೆಯದಂತೆ ತಡೆಯಲಾಗಿದೆ. ಅಲ್ಲದೆ ಪ್ರತಿವರ್ಷ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತದೆ.
ಅದರಂತೆ ಈ ಬಾರಿ ಹಲವು ಚಕ್ ಪೋಸ್ಟ್ ಗಳು ಹೊಂದಿದ್ದರು, ಅವುಗಳ ಕಣ್ಣು ತಪ್ಪಿಸಿ ಎರಡರಿಂದ ಮೂರು ಕುರಿಮರಿಗಳನ್ನು ಗಂಗಾ ಸ್ನಾನಕ್ಕೆ ತೆರಳುತಿದ್ದ ಮೈಲಾರಲಿಂಗನ ಪಲ್ಲಕ್ಕಿ ಮೇಲೆ ಎಎಯಲಾಗಿದೆ ಎಂದು ತಿಳಿದು ಬಂದಿದೆ.
ಹೊನ್ನಕೆರೆಗೆ ಮೈಲಾರಲಿಂಗನ ಗಂಗಾ ಸ್ನಾನಕ್ಕೆ ಆಗಮಿಸಿದ ಸಂದರ್ಭ ಭಕ್ತಾದಿಗಳು ಎರಡರಿಂದ ಮೂರು ಕುರಿಮರಿಗಳನ್ನು ಆ ಪಲ್ಲಕ್ಕಿ ಮೇಲೆ ಎಸೆದ ಘಟನೆ ನಡೆದಿದೆ. ಪೊಲೀಸರು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ಪ್ರತಿ ವರ್ಷ ಒಂದೋ ಎರಡೋ ಕುರಿಮರಿ ಎಸೆಯುವುದು ಮಾತ್ರ ನಿಂತಿಲ್ಲ ಎನ್ನಬಹುದು.
ನಿಷೇಧದ ನಡುವೆಯು ಭಕ್ತರು ಕುರಿಮರಿ ಎಸೆಯುವ ಸಾಹಸ ಮಾಡುವುದು ಸರಿಯಲ್ಲ. ಕುರಿಮರಿ ಎಸೆದಿರುವ ಬಗ್ಗೆ ಸಮರ್ಪಕ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಲವರು ಉಹಾಪೋಹ ಎಬ್ಬಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹರಕೆ ಕುರಿಮರಿ ಎಸೆಯದಂತೆ ಜಿಲ್ಲಾಡಳಿತದ ನಿಷೇಧದ ನಡುವೆಯು ಇಂತಹ ಕಾರ್ಯ ಮಾಡಿರುವುದು ಅಪರಾಧ ನಿಜವಾಗಿ ಎಸೆದಿದ್ದಲ್ಲಿ ಕಾನೂನು ಮೀರಿ ಭಕ್ತರು ವರ್ತಿಸುವುದು ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಭಕ್ತರು ಎಸೆಯಲು ತಂದ ಅಂದಾಜು 1161 ಕುರಿಮರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.