ಮಹಿಳೆಯರು ಸ್ವಾವಲಂಬಿಯಾಗಿ ಬೆಳೆಯಲಿ-ನಾಗರಾಜ ಹದ್ಲಿ
ಮಹಿಳಾ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ
ಯಾದಗಿರಿ,ಶಹಾಪುರಃ ಮಹಿಳಾ ಸಬಲೀಕರಣದೊಂದಿಗೆ ಮಹಿಳೆಯರು ಸ್ವಉದ್ಯೋಗ ಕಂಡುಕೊಂಡು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಬೆಳೆಯಬೇಕು. ಕುಟುಂಬಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ತಾಲೂಕಾ ಯೋಜನಾಧಿಕಾರಿ ನಾಗರಾಜ ಹದ್ಲಿ ತಿಳಿಸಿದರು.
ಸಂಸ್ಥೆಯ ನಗರ ವಲಯದ ಕಚೇರಿಯಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ಉಚಿತ ಟೇಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗೆಡೆ ಅವರ ಮೂಲ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು, ಸ್ವಯಂವಾಗಿ ಮಹಿಳೆಯರನ್ನು ಉದ್ಯೋಗದಲ್ಲಿ ಬಲಪಡಿಸಲು ಸಹಕಾರ ನೀಡುವದಾಗಿದ್ದು, ಮಹಿಳೆಯರು ಎಲ್ಲರೂ ಸ್ವಾವಲಂಬಿಯಾಗು ಬದುಕು ಕಟ್ಟಿಕೊಳ್ಳಲು ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಸಹಾಯ ಸಹಕಾರ ನೀಡುತ್ತಿದೆ. ಕಾರಣ ಮಹಿಳೆಯರು ಇದರು ಸದುಪಯೋಗ ಪಡೆದುಕೊಳ್ಳಬೇಕು.
ಕೌಶಲ್ಯಾಭಿವೃದ್ಧಿಗಾಗಿ ಯೋಜನೆ ಮೂಲಕ ತರಬೇತಿ ಸಂಸ್ಥೆಗಳನ್ನು ಹಾಗೂ ರುಡ್ಸೆಟ್ ಸಂಸ್ಥೆಗಳನ್ನು ಪ್ರಾರಂಭೀಸಿದ್ದು, ಸ್ವಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಹಿಳೆರು ಇದರ ಸದುಪಯೋಗ ಪಡೆಯಿರಿ ಎಂದರು.
ನಗರಸಭೆ ಸದಸ್ಯ ರಾಜೂ ಪಾಟೀಲ್ ಮಡ್ನಾಳ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಬಸವರಾಜ ಇಜೇರಿ ಉಪಸ್ಥಿತರಿದ್ದರು. ಟೇಲರಿಂಗ್ ತರಬೇತಿ ಶಿಕ್ಷಕರಾದ ಶೈಲಾಶ್ರೀ, ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಂಘಗಳ ಸದಸ್ಯರು, ವಲಯದ ಸೇವಾ ಪ್ರತಿನಿಧಿಗಳು ಹಾಜರಿದ್ದರು.
ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ ನಿರೂಪಿಸಿದರು. ವಲಯದ ಮೇಲ್ವಿಚಾರಾಕ ಶಿವಲಿಂಗಮ್ಮ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಅನ್ನಪೂರ್ಣ ವಂದಿಸಿದರು.