ಜನಮನಪ್ರಮುಖ ಸುದ್ದಿ

ರಾಜ್ಯಪಾಲರ ಡೆಡ್ ಲೈನ್ ಗೆ ಡೋಂಟ್ ಕೇರ್ ಅಂದಿತಾ ದೋಸ್ತಿ ಸರ್ಕಾರ!

ಬೆಂಗಳೂರು: ಶುಕ್ರವಾರ ಮದ್ಯಾನ 1:30 ರ ಒಳಗೆ ಬಹುಮತ ಸಾಬೀತು ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನಿನ್ನೆಯೇ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಮುಖೇನ ನಿರ್ದೇಶನ ನೀಡಿದ್ದರು. ಆದರೆ, ಕುಮಾರಸ್ವಾಮಿ ಸರ್ಕಾರ ರಾಜ್ಯಪಾಲರ ನಿರ್ದೇಶನವನ್ನು ಮೀರಿದೆ. ಅಂತೆಯೇ ರಾಜ್ಯಪಾಲರು ಸೂಚನೆ ನೀಡಿದ್ದನ್ನೇ ಸಚಿವ ಕೃಷ್ಣಭೈರೇಗೌಡ ಹಾಗೂ ದೋಸ್ತಿ ಪಕ್ಷದ ಶಾಸಕರು ಸದನದಲ್ಲಿ ಪ್ರಶ್ನಿಸಿ ಚರ್ಚೆಗೊಳಪಡಿಸಿದರು. ಅಲ್ಲದೆ ಆಡಳಿತ ಪಕ್ಷಗಳ ಶಾಸಕರು ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆ ಕೂಗಿದ್ದಾರೆ.

ಮತ್ತೊಂದು ಕಡೆ ಬಿಜೆಪಿ ಶಾಸಕರು ಸದನದಲ್ಲಿ ಬಹುತೇಕ ಕಾಲ ಮೌನಕ್ಕೆ ಶರಣಾಗಿತ್ತು. ಆಗಾಗ ರಾಜ್ಯಪಾಲರ ನಿರ್ದೇಶನದಂತೆ ವಿಶ್ವಾಸ ಮತ ಸಾಬೀತು ಪಡಿಸುವಂತರ ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button