ಪ್ರಮುಖ ಸುದ್ದಿ
ಟವರ್ ಏರಿ ಆತ್ಮಹತ್ಯೆ ಗೆ ಮುಂದಾದ ರೈತ ಏಕೆ ಗೊತ್ತಾ..?
ಟವರ್ ಏರಿ ಆತ್ಮಹತ್ಯೆ ಗೆ ಮುಂದಾದ ರೈತ ಏಕೆ ಗೊತ್ತಾ..?
ಮಂಡ್ಯಃ ತನ್ನ ಜಮೀನಿನಲ್ಲಿ ಮೇನ್ ವಿದ್ಯುತ್ ಲೈನ್ ಎಳೆದಿದ್ದು ಜೆಸ್ಕಾಂ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಬದಲಿಗೆ ಪೊಲೀಸರನ್ನು ಕರೆ ತಂದು ಬೆದರಿಕೆವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ ರೈತ ಕುಮಾರ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಮರು ಬೆದರಿಕೆವೊಡ್ಡಿದ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯ ಸೋಮನಳ್ಳಿಯಲ್ಲಿ ನಡೆದಿದೆ.
ವಿದ್ಯುತ್ ಟವರ್ ನಿಂದ ಬೆಳೆ ಬೆಳೆಯಲು ಅನಾನುಕೂಲವಾಗಿದ್ದು, ಇದಕ್ಕೆ ತಕ್ಕ ಪರಿಹಾರ ನೀಡಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ರೈತ ಕುಮಾರ ಮನವಿ ಮಾಡಿದ್ದ.
ಆದರೆ ಮನವಿಗೆ ಸ್ಪಂಧಿಸದ ಜೆಸ್ಕಾಂ ಅಧಿಕಾರಿಗಳು, ಪರಿಹಾರ ನೀಡುವ ಕುರಿತು ಯಾವುದೇ ಸ್ಪಷ್ಟನೆ ನೀಡದೆ ಪೊಲೀಸ್ ರನ್ನು ಕರೆ ತಂದು ಬೆದರಿಕೆವೊಡ್ಡಿದ್ದಾರೆ ಎಂದು ಆತನ ಆರೋಪವಾಗಿದೆ.
ರೈತ ಕುಮಾರ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಮುಂದಾಗಿದ್ದು, ಆತನಮನವೊಲಿಕೆಗೆ ಅಧಿಕಾರಿಗಳು, ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.