ನಿರ್ವಹಣೆಯಲ್ಲಿ ಕೈ ತಪ್ಪುತ್ತಿರುವ ಶಹಾಪುರ ವೈಷ್ಣವಿ ಹೊಟೇಲ್
ತಪ್ಪುತ್ತಿರುವ ವೈಷ್ಣವಿ ಹೊಟೇಲ್ ನಿರ್ವಹಣೆ
ಶಹಾಪುರಃ ಪ್ರಥಮವಾಗಿ ನಗರದ ಸಿಬಿ ಕಮಾನ್ ಹತ್ತಿರ ಸುಮಾರು ಒಂದು ವರ್ಷದ ಹಿಂದೆ ವೈಷ್ಣವಿ ಹೊಟೇಲ್ ಭರ್ಜರಿ ಓಪನಿಂಗ್ ಮಾಡಲಾಗಿತ್ತು.
ಸುಸಜ್ಜಿತ ವ್ಯವಸ್ಥೆ ಜೊತೆಗೆ ಹೊಟೇಲ್ ನಲ್ಲಿ ಟಿ, ಕಾಫಿ ಮತ್ತು ಉಪಹಾರ, ಊಟ ಚನ್ನಾಗಿಯೇ ದೊರೆಯತಿತ್ತು. ಅಲ್ಲದೆ ಉತ್ತಮ ನಿರ್ವಹಣೆ ಹೊಂದಿತ್ತು.

ಆದರೆ ಈಗೀಗ ಹೊಟೇಲ್ ನಿರ್ವಹಣೆ ಕೈ ತಪ್ಪಿದೆ ಎಂದು ಹೊಟೇಲ್ ಗೆ ಬಂದ ಗ್ರಾಹಕರು ಇಡಿ ಶಾಪ ಹಾಕುವಂತಾಗಿದೆ.
ಕಾರಣ ಒಂದು ಕಾಫಿಗೆ 25 ರೂ. ಬೆಲೆ ಕೊಟ್ಟರು, ಕಾಫಿ ತಂದಿಟ್ಟ ಕಪ್ ನ್ನು ಒಮ್ಮೆ ಓದುಗರು ಫೋಟೊವೊಂದನ್ನು ನೋಡಬೇಕು. ಕಪ್ ಗೆ ಕೈಹಿಡಿಕೆ ಮುರಿದಿದ್ದು, ಹಾಗೇ ಅಂತಹ ಕಪ್ ನಲ್ಲಿ ಕಾಫಿ ತಂದಿಟ್ಟಿದ್ದಾರೆ. ಇದೊಂದು ಸಣ್ಣ ಉದಾಹರಣೆ.
ಅಲ್ಲದೆ ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರುತ್ತಿದೆ.
ಮತ್ತು ಆರ್ಡರ್ ಪಡೆದುಕೊಂಡು ತಂದ ಯಾವುದೇ ಆಹಾರ, ಕಾಜುಕುರ್ಮಾ ಆಗಲಿ ಇತರೆ ಬಾಜಿ, ಕಾಯಿಪಲ್ಲೆ ಸಮರ್ಪಕ ರುಚಿ ತಪ್ಪಿದೆ.
ಉಪ್ಪು ಅಥವಾ ಖಾರಾ ಎಣ್ಣೆ ಜಾಸ್ತಿ ಹಾಕಿರುತ್ತಾರೆ,, ರುಚಿಕಟ್ಟಾಗಿ ಮಾಡುತ್ತಿಲ್ಲ ಮತ್ತು ದುಡ್ಡು ಮಾತ್ರ ಜಾಸ್ತಿ ಇದೆ. ಈ ಮೊದಲನಂತೆ ಮೆಂಟೇನೆನ್ಸ್ ಕೈ ತಪ್ಪಿದ್ದು, ಗ್ರಾಹಕರು ದೂರುವಂತಾಗಿದೆ.
ಕೂಡಲೆ ಸಂಬಂಧಿಸಿದ ಮಾಲೀಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಇವಾಗಿರುವ ಹೊಟೇಲ್ ಜೊತೆಗೆ ಇದೊಂದು ಜಮೆಯಾಗುವದು ಸನ್ನಿಹಿತವಾಗಿದೆ ಎನ್ನುತ್ತಿದ್ದಾರೆ ಗ್ರಾಹಕರು.
ಕಳೆದ ಬಾರಿ ಈ ಹೊಟೇಲ್ ಗೆ ಮೈಸೂರ ರಾಜ ಮನೆತನದ ಅರಸರು ಬಂದು ಉಪಹಾರ ಸೇವಿಸಿ ಹೋಗಿರುವ ಕುರಿತು ಸುದ್ದಿ ಮಾಡಲಾಗಿತ್ತು. ಆಗ ಹೊಟೇಲ್ ಒಂದು ಇಮೇಜ್ ಬಂದಿತ್ತು ಅಂದ್ರೆ ತಪ್ಪಾಗಲಾರದು. ಈಗ ಅದು ನಿರಂಕುಶವಾದೀತು..ಅಷ್ಟೆ.
ಈ ಸುದ್ದಿ ವೈಷ್ಣವಿ ಹೊಟೇಲ್ ನವರು ಎಚ್ಷೆತ್ತುಕೊಳ್ಳಲಿ ಎಂಬುದರ ಉದ್ದೇಶಕ್ಕಾಗಿ ಮಾತ್ರ. ಏಕೆಂದರೆ ನಮ್ಮೂರಲ್ಲಿ ಉತ್ತಮ ಹೊಟೇಲ್ ಇದೆ ಕಲಬುರ್ಗಿ ನಿಟ್ಟರೆ ಶಹಾಪುರದಲ್ಲಿ ಊಟಕ್ಕೆ ಟಿಫನ್ ಗಾಗಿ ಉತ್ತಮ ಹೊಟೇಲ್ ಮತ್ತು ದಾಬಾಗಳಿವೆ ಎಂಬ ಖ್ಯಾತಿ ಹೊಂದಿದೆ.
ಅಲ್ಲದೆ ನಾವು ಸಾಕಷ್ಟು ಸ್ನೇಹಿತರಿಗೆ ಇಂತಹ ಹೊಟೇಲ್ ಉತ್ತಮವಾಗಿದೆ ಇಂತಲ್ಲೇ ಟಿಫನ್ ಊಟ ಮಾಡಿ ಎಂದು ಹೇಳುತ್ತಿರುತ್ತೇವೆ ಪರ ಊರಿನ ಸ್ನೇಹಿತರಿಗೆ. ನಮಗೂ ಇದೊಂದು ಒಂದು ಹೆಮ್ಮೆ ಅಲ್ಲವೇ.?
ಹೀಗಾಗಿ ಮುಂಬರುವ ದಿನಗಳಲ್ಲಿ ಹೊಟೇಲ್ ಮಾಲೀಕರು ತಿದ್ದಿಕೊಂಡು ಸಮರ್ಪಕ ವ್ಯವಸ್ಥೆ ಮಾಡಿದ್ದಲ್ಲಿ ತಮಗೂ ಲಾಭ ನಮ್ಮೂರಿಗೆ ಹೆಸರು ಬರಲಿದೆ.