ಪ್ರಮುಖ ಸುದ್ದಿ
ಕೊಲ್ಹಾಪುರ ಬಳಿ ನದಿಗೆ ಉರುಳಿದ ಬಸ್ – 13 ಸಾವು
ಮಹಾರಾಷ್ಟ್ರಃ ಚಾಲಕನ ಆಯ ತಪ್ಪಿ ಬಸ್ ವೊಂದು ಶುಕ್ರವಾರ ರಾತ್ರಿ ನದಿಗೆ ಉರುಳಿದ ಪರಿಣಾಮ 13 ಜನ ಪ್ರಯಾಣಿಕರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ನಗರ ಬಳಿ ನಡೆದಿದೆ.
ನಗರ ಸಮೀಪ ಪಂಚಗಂಗಾ ನದಿಗೆ ಬಸ್ ಉರುಳಿದ್ದು, 13 ಜನ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಿದೆ ಎಂದು ತಿಳಿದು ಬಂದಿದೆ. ಗಣಪತಿಪುಳಾದಲ್ಲಿ ಶ್ರೀಗಣಪತಿಯ ದರ್ಶನ ಪಡೆದು ಪುಣೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬಸ್ ಮೇಲೆತ್ತುವ ಕಸರತ್ತು ನಡೆಸಿದ್ದಾರೆ. ಉಳಿದ ಪ್ರಯಾಣಿಕರ ರಕ್ಷಣೆ ಕಾರ್ಯ ನಡೆದಿದೆ. ಸಾರ್ವಜನಿಕರು ಸಹಕಾರ ನೀಡುತ್ತಿದ್ದು, ಭೀಕರ ಘಟೆನೆಯಿಂದ ಜನ ಭಯಭೀತರಾಗಿದ್ದಾರೆ.
ವಿಷಾದದ ಸಂಗತಿ
ಪುಣೆಯ ಬಾಲೆವಾಡಿಯ ನನ್ನ ಪಕ್ಕದ ರಹವಾಸಿಗಳು
ಇವರು. ಒಂದೇ ಕುಟುಂಬದ 9 ಜನರು. ಈ ಕುಟುಂಬದ
ಮಾವ ಮತ್ತು ಇವರ 2 ಜನ ಹೆಣ್ಣು ಮಕ್ಕಳು ಹಾಗೂ
ಬಸ್ ಚಾಲಕ ಸೆರಿ 13 ಜನರು ಮೃತಪಟ ದುರಧೈವಿಗಳು.