ಪ್ರಮುಖ ಸುದ್ದಿ

ರಾಜ ಮಹಾರಾಜರಿಗೆ ಚೌಕಿದಾರರ ಭಯ ಶುರು-ಮೋದಿ

ಚೌಕಿದಾರರು ಭ್ರಷ್ಟ, ಕಳ್ಳರನ್ನು ಸಹಿಸಿಕೊಳ್ಳಲ್ಲ.!

ದೆಹಲಿಃ ದೇಶದ ಪ್ರತಿಯೊಬ್ಬರು ಚೌಕಿದಾರರಾಗಬೇಕು. ಈಗ ದೇಶದ ತುಂಬೆಲ್ಲಾ ಜನ ಚೌಕಿದಾರ ಅಂತಿದ್ದಾರೆ. ಚೌಕಿದಾರರು ಭ್ರಷ್ಟ, ಕಳ್ಳರನ್ನು ಸಹಿಸಿಕೊಳ್ಳಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಮೈ ಭಿ ಚೌಕಿದಾರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶವನ್ನು ಮಾರುವವರ ವಿರುದ್ಧ ಎಲ್ಲರೂ ಒಂದಾಗಬೇಕಿದೆ. ಆ ನಿಟ್ಟಿನಲ್ಲಿ ಜನ ನಾನು ಚೌಕಿದಾರ ಎಂದು ಹೇಳುತ್ತಿದ್ದಾರೆ. ದೇಶದ 130 ಕೋಟಿ ಜನ ಶಪಥ ಮಾಡಬೇಕಿದೆ. ನಾನು ಚೌಕಿದಾರವೆಂದು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಎಲ್ಲರೂ ಚೌಕಿದಾರ ಎಂದು ಹೇಳುತ್ತಿರುವದರಿಂದ ಹಲವಾರು ರಾಜ ಮಹಾರಾಜರಿಗೆ ಚೌಕಿದಾರರ ಭಯ ಶುರವಾಗಿದೆ.

ಶಿಕ್ಷಕರು, ಮಕ್ಕಳು ವಿದ್ಯಾರ್ಥಿಗಳು ವಿಜ್ಞಾನಿಗಳು ಸೇರಿದಂತೆ ಎಲ್ಲರೂ ಚೌಕಿದಾರರಾಗಿದ್ದಾರೆ. ಪೋಲಿಸರು ಸಹ ಚೌಕಿದಾರರಾಗಿ ಅವರ ಕರ್ತವ್ಯವನ್ನು ಸಮರ್ಪಕವಾಗಿ ಪಾಲನೆ ಮಾಡಿದ್ದಲ್ಲಿ ದೇಶ ಇನ್ನಷ್ಟು ಸುಧಾರಣೆ ಹೊಂದುವಲ್ಲಿ ಸಂಶವೇ ಇಲ್ಲ.

ಕಳೆದ ಐದು ವರ್ಷ ದೇಶ ಪ್ರಗತಿ ಅತ್ತ ಸಾಗಲು ಜನರ ಸಹಕಾರವೇ ಕಾರಣ ಎಂದರು. ಮತ್ತೆ ಬಾಲಕೋಟ್ ದಾಳಿ ಮಾಡಿರುವ ಕೇಳಿದ ಪ್ರಶ್ನೆಗೆ ಬಾಲಕೋಟ್ ದಾಳಿ ನಾನು ಮಾಡಿಲ್ಲ. ನಮ್ಮ ದೇಶದ ವೀರ ಸೈನಿಕರು ಮಾಡಿದ್ದಾರೆ. ಅವರಿಗೊಂದು ಎಲ್ಲರೂ ಸೆಲ್ಯೂಟ್ ಹೊಡೆಯೋಣವೆಂದರು.

ಪ್ರಸ್ತುತ ದೇಶದ ಆರ್ಥಿಕ ಸ್ಥೀತಿ ಕಂಡು ಇಡಿ ಜಗತ್ತು ಬೆರಗಾಗುವಂತಾಗಿದೆ. ಪ್ರಗತಿ ಪಥದಲ್ಲಿರುವ ಎಲ್ಲಾ ದೇಶಗಳೊಂದಿಗೆ ನಮ್ಮ ಸಂಬಂಧ ಚನ್ನಾಗಿ ಇದೆ. ಕಳೆದ ಐದ ವರ್ಷದಲ್ಲಿ 8 ಕೋಟಿ ನಕಲಿ ಫಲಾನುಭವಿಗಳು ಮತ್ತು 3 ಲಕ್ಷ ನಕಲಿ ಕಂಪನಿಗಳನ್ನು ಗುರುತಿಸಿ ತೆಗೆದುಹಾಕಲಾಗಿದೆ.

ನಕಲಿ ಕಂಪನಿ ಮೂಲಕ ದೇಶದ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಕೋಟ್ಯಾಧಿಪತಿಯಾಗಿದವರನ್ನು ರೋಡ್‍ಪತಿ ಮಾಡಲಾಗಿದೆ. ಇದು ಅಲ್ಲವೇ ಕಪ್ಪು ಹಣ ಹುಡುಕುವ ದಾರಿ ಎಂದು ತಿಳಿಸಿದರು. ದೇಶದ ಜನ ಸುರಕ್ಷತೆ ಬಗ್ಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಹಗರಣ ನಡೆಯದಂತೆ ಭ್ರಷ್ಟಚಾರ ನಡೆಯದಂತೆ ಆಡಳಿ ನಡೆಸಲಾಗಿದೆ. ಭ್ರಷ್ಟಚಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button