ಅಯ್ಯಪ್ಪಸ್ವಾಮಿಃ ಭಕ್ತಿ ಶ್ರದ್ಧೆಯ ಇರಮುಡಿ ಪೂಜೆ
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇರುಮುಡಿ ಪೂಜೆ
ಯಾದಗಿರಿ :ನಗರದ ಚಿತ್ತಾಪುರ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ವೃತಧಾರಿಗಳಿಂದ ಇರುಮುಡಿ ಮಹಾಪೂಜೆ ಅತ್ಯಂತ ಭಕ್ತಿ, ಶ್ರದ್ದೆಯಿಂದ ಶನಿವಾರ ಬೆಳಿಗ್ಗೆ ನೆರವೇರಿತು.
ಗುರುಸ್ವಾಮಿ ಸುಭಾಷ್ ಚಂಡ್ರಿಕಿ ವೈದಿಕತ್ವದಲ್ಲಿ ಅಯ್ಯಪ್ಪಸ್ವಾಮಿಯ ಇರುಮುಡಿಯನ್ನು ಕಟ್ಟಲಾಯಿತು. ವ್ರತಧಾರಿಗಳು ಗುರುಸ್ವಾಮಿಯಿಂದ ಪಡೆದ ಇರುಮುಡಿಯನ್ನು ತಲೆಯ ಮೇಲೆ ಹೊತ್ತುಕೊಂಡು “ಸ್ವಾಮಿಯೇ ಶರಣಂ ಅಯ್ಯಪ್ಪ.. ಬಂದೇವಪ್ಪ ಅಯ್ಯಪ್ಪ.. ಬರುವೆವಪ್ಪ ಅಯ್ಯಪ್ಪ..” ಎಂದು ಹಾಡುತ್ತಾ ಶ್ರೀ ಅಯ್ಯಪ್ಪ ಸ್ವಾಮಿ ಗರ್ಭಗುಡಿಯ ಸುತ್ತಲು ಪ್ರದಕ್ಷಿಣೆ ಹಾಕಿದರು. ಮಹಾಪೂಜೆಯು ಮಂಗಳಾರುತಿಯೊಂದಿಗೆ ಸಂಪನ್ನಗೊಂಡಿತು. ನಂತರ ಎಲ್ಲರೂ ಮಹಾಪ್ರಸಾದವನ್ನು ಸ್ವೀಕರಿಸಿದರು.
ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಶಬರಿಮಲೆ ಯಾತ್ರೆಗೆ ಹೋಗುತ್ತಿರುವ ಅಯ್ಯಪ್ಪಸ್ವಾಮಿ ವೃತಧಾರಿಗಳಿಗೆ ಸಂಬ್ರಮದಿಂದ ಬಿಳ್ಕೊಟ್ಟರು. ಕಾರ್ಯಕ್ರಮದಲ್ಲಿ ಅಯ್ಯಪ್ಪಸ್ವಾಮಿ ವೃತಧಾರಿಗಳಾದ ವೀರೇಶ ನೆಲ್ಲೋಗಿ, ಬನ್ನಪ್ಪ ಹೊಟ್ಟಿ, ಮಲ್ಲಣ್ಣ ಕಂಬಳಿ, ಕಲ್ಯಾಣಕುಮಾರ ಅಂಗಡಿ, ಶರಣಪ್ಪ ಪಸ್ಪೂಲ್, ಮಹೇಶ ಸುರಪುರ, ರಾಜು ಬೇವಿನಬೆಂಚಿ, ಸತೀಷ್ ಪಸ್ಪೂಲ್, ಜಗದೀಶ್ ಜಾಕಾ, ಮಲ್ಲಿಕಾರ್ಜುನ ಕುಲಕರ್ಣಿ, ದೇವಿಂದ್ರಪ್ಪ ಮೋಟ್ನಳ್ಳಿ ಮತ್ತು ವೃತಧಾರಿಗಳ ಕುಟುಂಬಸ್ತರು, ಬಂಧುಗಳು ಹಾಗೂ ಅನೇಕ ಜನ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
—–