ಪ್ರಮುಖ ಸುದ್ದಿ

ಬಿಸಲಿಗೆ ಬೇಸತ್ತು ಕಾಂಗ್ರೆಸ್ ಟೋಪಿ ಬಳಸಿದ ಪತ್ರಕರ್ತರು

ರಾಹುಲ್ ಬರುವಿಕೆಗಾಗಿ ಬಿಸಲಲಿ ಕಾಯ್ದು ಸುಸ್ತಾದ ಪತ್ರಕರ್ತರು

ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಜನಾಆಶೀರ್ವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಏರ್ಪಡಿಸಿದ್ದ ರೋಡ್ ಶೋ ಹಾಗೂ ನಾಗರಿಕ ಸನ್ಮಾನ ಕಾರ್ಯಕ್ರಮದ ಸುದ್ದಿಗಾಗಿ ಆಗಮಿಸಿದ್ದ ಪತ್ರಕರ್ತರು ಬಿಸಿಲಿನ ಸಮಸ್ಯೆ ಎದುರಿಸುವಂತಾಯಿತು. ಮಧ್ಯಾಹ್ನ ಎರಡು ಗಂಟೆಗೆ ರಾಹುಲ್ ಗಾಂಧಿಯವರು ಆಗಮಿಸಬೇಕಿತ್ತು. ಆದರೆ 3:30 ಗಂಟೆಯಾದರೂ ರಾಹುಲ್ ಬರಲಿಲ್ಲ.

ಅಲ್ಲದೆ ರಾಹುಲ್ ನೋಡಲು ಬಂದ ಜನರಿಗೆ, ಕಾರ್ಯಕರ್ತರಿಗೆ ಯಾವುದೆ ಆಸನ, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಬೆಳಗ್ಗೆಯಿಂದ ಬಿಸಲಿನ ತಾಪಕ್ಕೆ ಬೆದರಿ ಸಮೀಪದ ನೀರಿನ ಟ್ಯಾಂಕ್ ಹಾಗೂ ಐಟಿಐ ಕಾಲೇಜು ಬಿಲ್ಡಿಂಗ್ ಮೇಲೆ ನಿಂತು ಕಾಯುತ್ತಿರುವುದು ಕಂಡು ಬಂದಿತು.

ಪತ್ರಕರ್ತರೂ ಇದಕ್ಕೆ ಹೊರತಾಗಿಲ್ಲ. ವೇದಿಕೆ ಮುಂಭಾಗದಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಬಿಸಿಲಿನ ಹೊಡೆತಕ್ಕೆ ಸುಸ್ತು ಹೊಡೆದಿದ್ದರು. ಬಿಸಿಲಿನಿಂದ ಬಚವಾಗಲು ಪರದಾಡಿದರು. ಅನಿವಾರ್ಯವಾಗಿ ಕೆಲ ಪತ್ರಕರ್ತರು ಕಾಂಗ್ರೆಸ್ ಪಕ್ಷದ ಟೋಪಿ ಧರಿಸುವಂತಾಯಿತು.

ತಮ್ಮ ಕರ್ತವ್ಯ ನಿರ್ವಹಣೆಗಾಗಿ ಪತ್ರಕರ್ತರೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಆದರೂ ವೃತ್ತಿಪರತೆಯನ್ನು ಯಾದಗಿರಿ ಮಾಧ್ಯಮ ಮಿತ್ರರರು ಮೆರೆದರು.

Related Articles

Leave a Reply

Your email address will not be published. Required fields are marked *

Back to top button