ಕನ್ಯಾಕೋಳೂರ ಗ್ರಾಮಕ್ಕೆ ಎಸ್ಪಿ ಭೇಟಿ ಪರಿಶೀಲನೆ
ಗ್ರಾಮದೊಳಗೆ ಲಾಕ್ ಡೌನ್ ಪಾಲನೆ ಕಡ್ಡಾಯ, ಪ್ರವೇಶ ನಿರ್ಬಂಧ
ಶಹಾಪುರಃ ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಹೊಟ್ಟೆಪಾಡಿಗೆ ತೆರಳಿದ್ದ ಕನ್ಯಾಕೋಳೂರ ನಿವಾಸಿಗಳು ಕೊರೊನಾ ಹಾವಳಿಯಿಂದಾಗಿ ಮರಳಿ ಸ್ವಗ್ರಾಮಕ್ಕೆ ಆಗಮಿಸಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಬಾಗವಾನ್ ಸೋನಾವಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾರೊಬ್ಬರು ಗ್ರಾಮ ಪ್ರವೇಶಿಸದಂತೆ ಎಚ್ಚರಿಕೆವಹಿಸಿಬೇಕು. ಲಾಕ್ ಡೌನ್ ನಿಯಮ ಪಾಲನೆ ಕಡ್ಡಾಯಗೊಳಿಸಬೇಕು. ಗ್ರಾಮದಲ್ಲೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮ ಸೀಲ್ ಡೌನ್ಗೊಳಿಸಿದ್ದು ಇನ್ನಷ್ಟು ಬಿಗಿಗೊಳಿಸಿ. ಸುಖಾಸುಮ್ಮನೆ ಓಡಾಡದಂತೆ, ಅಗತ್ಯತೆಗೆ ಮಾತ್ರ ಅವಕಾಶ ಕಲ್ಪಿಸಿ ಅದು ಬಿಟ್ಟು ಗ್ರಾಮದ ಜನರು ಯಾರೊಬ್ಬರು ಹೊರಗಡೆ ಬಾರದಂತೆ ಮತ್ತು ಹೊರಗಡೆಯಿಂದ ಯಾರು ಗ್ರಾಮ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರು ಲಾಕ್ ಡೌನ್ ನಿಯಮ ಅನುಸಾರ ಅವಕಾಶ ಕಲ್ಪಿಸಿ. ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವವರು ಹೊರಗಡೆ ನುಸಳದಂತೆ ಕ್ರಮಕೈಗೊಳ್ಳಿ. ಸಂಬಂಧಿಕರು ಇತರೆ ಯಾರೊಬ್ಬರು ಕೇಂದ್ರಕ್ಕೆÀ್ರ ಭೇಟಿ ನೀಡುವಂತಿಲ್ಲ. ಹೊರಗಡೆಯಿಂದ ಬುತ್ತಿ ತರುವಂತಿಲ್ಲ ಈ ಕುರಿತು ನಿಗಾವಹಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಸಿಪಿಐ ಹನುಮರಡ್ಡೆಪ್ಪ, ಪಿಎಸ್ಐ ಸಿದ್ದೇಶ್ವರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರೇಶ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.
ಶಹಾಪುರ ತಾಲೂಕಿನಲ್ಲಿ ಮೂರು ಕಂಟೋನ್ಮೆಂಟ್ ಝೋನ್ ನಿರ್ಮಾಣ ಮಾಡಲಾಗಿದ್ದು, ಆ ಸ್ಥಳಗಳಿಗೆ ಯಾರೊಬ್ಬರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಸೋಂಕು ಪತ್ತೆಯಾದ ಕನ್ಯಾಕೋಳೂರ, ಚಂದಾಪುರ ತಾಂಡಾ ಹಾಗೂ ಕಿತ್ತೂರ ರಾಣಿ ವಸತಿ ಶಾಲೆ (ಕ್ವಾರಂಟೈನ್ ಕೇಂದ್ರ)ಯನ್ನು ಕಟೋನ್ಮೆಂಟ್ ಝೋನ್ಗಳಾಗಿ ಪರಿವರ್ತಿಸಲಾಗಿದ್ದು, ಈ ವ್ಯಾಪ್ತಿ ಲಾಕ್ ಡೌನ್ ನಿಯಮ ಕಠಿಣವಾಗಿರಲಿದೆ. ಸಾರ್ವಜನಿಕರು ಸ್ಪಂಧನೆ ಅಗತ್ಯವಿದೆ.
-ಜಗನ್ನಾಥರಡ್ಡಿ. ತಹಶೀಲ್ದಾರ. ಶಹಾಪುರ.